ಪೊನ್ನಂಪೇಟೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೂತನ ಸದಸ್ಯರನ್ನು ದಾಖಲು ಮಾಡುವ ಸಲುವಾಗಿ ನೋಂದಣಿಗಾರರು ಮತ್ತು ಮುಖ್ಯ ನೋಂದಣಿಗಾರರ (Enrollers and Master Enrollers) ಜೊತೆಯಲ್ಲಿ ಸಭೆ ನಡೆಸಲಾಯಿತು.
ಮುಂದಿನ ದಿನಗಳಲ್ಲಿ ಯಾವ ರೀತಿ ಸದಸ್ಯತ್ವ ನೋಂದಣಿ ನದಸಬೇಕು ಎನ್ನುವುದರ ಕುರಿತು ಮತ್ತು ಯಾವ ರೀತಿಯ ಕ್ರಮಗಳ ಅವಶ್ಯಕತೆ ಇದೆ ಎನ್ನುವುದರ ಕುರಿತು ಚರ್ಚಿಸಲಾಯಿತು. ಪಕ್ಷದ ಸಂಘಟನೆಯನ್ನು ಇನ್ನಷ್ಟು ಗಟ್ಟಿಮಾಡುವ ನಿಟ್ಟಿನಲ್ಲಿ ಎನ್ರೋಲರ್ಸ್ಗ್'ಗಳ ಪಾತ್ರ ಬಹಳ ಮಹತ್ವದ್ದು.
#Kodagu #Virajpet #Madikeri #Ponnampet
ಕೊಡಗು ಜಿಲ್ಲೆಯ ತಿತಿಮತಿ ಗ್ರಾಮದಲ್ಲಿ ದಟ್ಟವಾದ ಕಾಡು ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡದ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಮಾಡಲು ಅವರ ವಾಸಸ್ಥಳಗಳಿಗೆ ಭೇಟಿ ಮಾಡಿದೆ.
ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ, ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯಗಳ ಮಟ್ಟದಲ್ಲಿ ಯಾವ ರೀತಿಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ತರಬಹುದು ಎಂಬುದರ ಕುರಿತಾಗಿ ಚರ್ಚೆ ನಡೆಸಲಾಯಿತು.
#Kodagu #Virajpet #Madikeri #Ponnampet #Thithimathi
ಕರ್ನಾಟಕ ಎದುರಿಸುತ್ತಿರುವ ಹಲವಾರು ಅಂತರರಾಜ್ಯ ನದಿ ವಿವಾದಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಕರೆದಿರುವ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸುವ ಮುನ್ನ, ಸಿ.ಎಲ್.ಪಿ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮಾಜಿ ಜಲಸಂಪನ್ಮೂಲ ಸಚಿವರದಾ ಶ್ರೀ ಎಂ.ಬಿ.ಪಾಟೀಲ್ ಅವರು, ಶ್ರೀ ಎಚ್.ಕೆ.ಪಾಟೀಲ್ ಅವರು, ಕೆ.ಪಿ.ಸಿ.ಸಿಯ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ಅವರು, ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ.ಹರಿ ಪ್ರಸಾದ್ ಅವರು, ಹಾಗೂ ಪಕ್ಷದ ಮುಖ್ಯ ಸಚೇತಕರಾದ ಅಜಯ್ ಸಿಂಗ್ ಅವರು ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆ ಜರುಗಿತು.
ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಈ ವಿಷಯದ ಬಗ್ಗೆ ಯಾವ ನಿಲುವನ್ನು ತಳಿಯಬೇಕು ಎಂಬುದರ ಬಗ್ಗೆ ದೀರ್ಘವಾದ ಸಮಾಲೋಚನೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಕಚೇರಿಯಲ್ಲಿ ನಡೆಯಿತು. ಕಾವೇರಿ ನದಿ, ಮಹದಾಯಿ, ಕೃಷ್ಣ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರ ಯಾವ ರೀತಿ ಹೆಜ್ಜೆ ಇಡಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವನ್ನು ತಿಳಿಸಲು ಚರ್ಚೆ ಮಾಡಲಾಯಿತು.
ಈ ಚರ್ಚೆಯ ಸಂದರ್ಭದಲ್ಲಿ ಹಲವಾರು ವಿಚಾರಗಳನ್ನು ಹಿರಿಯ ಮುಖಂಡರಿಂದ ಕಲಿಯುವ ಅವಕಾಶ ಒದಗಿಬಂತು. ಈ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯನವರಿಗೂ, ಇತರ ಮುಖಂಡರಿಗೂ ನನ್ನ ಧನ್ಯವಾದಗಳು.
#Kaveri #Cauvery #Krishna #Mahadayi #Mekedatu #Kodagu #Ponnampet #Madikeri #Virajpet
ಕೊಡವ ಕೂಟಾಳಿಯಡ ಕೂಟದವರ ಯೂಟ್ಯೂಬ್ ಚಾನೆಲ್'ನಲ್ಲಿ ನನ್ನದೊಂದು ಸಂದರ್ಶನ ಇತ್ತೀಚೆಗೆ ಪ್ರಸಾರವಾಗಿದೆ. ಇದರಲ್ಲಿ ಹಲವಾರು ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ. ಸಂದರ್ಶಕರು, ತಾಂತ್ರಿಕ ವರ್ಗದವರು ಮತ್ತು ಕೊಡವ ಕೂಟಾಳಿಯಡ ಕೂಟದವರಿಗೂ ನನ್ನ ಧನ್ಯವಾದಗಳು.
#Kodagu #Coorg #Madikeri #Virajpet #Ponnampet #KodavaKootaliyaadaKoota
Poverty and disparity are the biggest threats to the progress of this great nation. There will be real progress when tribal children get their rightful share in the development of the country and when they become an active part of the mainstream.
ಬುಡಕಟ್ಟು ಜನಾಂಗದ ಮಕ್ಕಳು ಈ ದೇಶದ ಅಭಿವೃದ್ಧಿಯ ಪಾಲುದಾರರಾಗಬೇಕು. ಎಲ್ಲಾ ವರ್ಗದ ಜನ ಮುಖ್ಯವಾಹಿನಿಗೆ ಬಂದಾಗ ಮಾತ್ರ ನಮ್ಮ ಸಂವಿಧಾನದ ಆಶಯಗಳು ಈಡೇರುವುದಕ್ಕೆ ಸಾಧ್ಯ. ಬಡತನ ಮತ್ತು ಅಸಮಾನತೆ ನಮ್ಮ ದೇಶದ ಅಭಿವೃದ್ಧಿಗೆ ಅತಿ ದೊಡ್ಡ ಶತ್ರುಗಳು.
ಕಾಡು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬಡತನದಿಂದ ನರಳುತ್ತಿರುವ ಹಲವಾರು ಕುಟುಂಬಗಳಲ್ಲಿ ಈ ಮಕ್ಕಳೂ ಕೂಡ ಸೇರಿದ್ದಾರೆ. ನಾವು ಮಾಡುವ ಪ್ರತಿ ಕೆಲಸವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉಪಯೋಗಕ್ಕೆ ಬರಬೇಕು ಎಂಬ ನಿರ್ದಾರ ನಮ್ಮದಾಗಲಿ.
#TribalRights #Constitution #Equity #Equality #Poverty #Kodagu #Coorg #Virajpet #Madikeri #Gonikoppa #Napokul