Tribute to Late A.K. Subbaiah on His Death Anniversary, 27/08/2026

ನನ್ನ ಪೂಜ್ಯನೀಯ ತಂದೆಯವರು, ಜನರ ಕಷ್ಟ-ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಾ, ತನ್ನ ಜೀವಮಾನದ್ದುದ್ದಕ್ಕೂ ಜನಪರ ಧ್ವನಿಯಾಗಿ ಪ್ರಜ್ವಲಿಸಿ, ಕೊಡಗಿನಾದ್ಯಂತ ಮನೆಮಾತಾಗಿದ್ದ ಹಿರಿಯ ರಾಜಕಾರಣಿಗಳು ಆದ...
ದಿವಂಗತ ಶ್ರೀ ಎ.ಕೆ ಸುಬ್ಬಯ್ಯ
ರವರ ಪುಣ್ಯ ಸ್ಮರಣೆ ದಿನದಂದು
ಅವರಿಗೆ ನನ್ನ ಗೌರವಪೂರ್ಣ ನಮನಗಳು
 

Newly Elected Karnataka Bar Council Members Meet CM DK Shivakumar, 26/08/2026

ನೂತನವಾಗಿ ಆಯ್ಕೆ ಆಗಿರುವ ಕರ್ನಾಟಕ ಬಾರ್ ಕೌನ್ಸಿಲ್ ಸದಸ್ಯರು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಮತ್ತು ಅಹವಾಲುನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಬಾರ್ ಕೌನ್ಸಿಲ್ ಗೆ ನೂತನ ಕಟ್ಟಡ ಹಾಗು ವಕೀಲರ ವೆಲ್ಫೇರ್ ನಿಧಿಯ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್, ಕೆಪಿಸಿಸಿ ಕಾನೂನು ಘಟದ ಅಧ್ಯಕ್ಷರು ಉಪಸ್ಥಿತರಿದ್ದರು.
 

May Onam bring happiness, prosperity, and peace to everyone’s lives. Heartfelt Onam greetings to all., 26/08/2026

ಓಣಂ ಎಲ್ಲರ ಬದುಕಿಗೂ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿ ತರಲಿ.
ಎಲ್ಲರಿಗೂ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು
 
 

Heartfelt Eid Milad greetings to all Muslim brothers and sisters across the state., 26/08/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ
ಈದ್ ಮಿಲಾದ್
ಹಬ್ಬದ ಹಾರ್ದಿಕ ಶುಭಾಶಯಗಳು

World Tribal Day Health Checkup and Blood Donation Camp Held at Balugodu, 26/08/2026

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ ಮಡಿಕೇರಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಸಂಸ್ಕೃತಿ ಸಿಹಿ ಟ್ರಸ್ಟ್ ಕೊಡಗು, ಇವರ ಜಂಟಿ ಸಹಯೋಗದೊಂದಿಗೆ ವಿಶ್ವ ಬುಡಕಟ್ಟು ದಿನಾಚರಣೆಯ ಹಾಗೂ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಬಾಳುಗೋಡುವಿನ ಏಕಲವ್ಯ ಮಾದರಿ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರುತ್ತಾ ವಿಶ್ವ ಬುಡಕಟ್ಟು ದಿನಾಚರಣೆಯ ಅಂಗವಾಗಿ ಈ ಒಂದು ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯಂತ ಸಮಯೋಚಿತವಾಗಿದೆ. ನಾಡಿನ ಸಂಸ್ಕೃತಿಯನ್ನು ಕಾಪಾಡುವಂತಹ ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಶ್ರಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ದಿನದಂದು ಬುಡಕಟ್ಟು ಜನರ ಮಧ್ಯೆ ಆರೋಗ್ಯ ತಪಾಸಣೆ ಶಿಬಿರವನ್ನು ಮಾಡುವುದು ಹಾಗೂ ರಕ್ತದಾನದಂತಹ ಉನ್ನತ ಕಾರ್ಯದ ಬಗ್ಗೆ ಮಾಹಿತಿ ಒದಗಿಸಿ ಅವರನ್ನು ಒಳಗೊಡಿಸುವುದು ಪುಣ್ಯಕಾರ್ಯವಾಗಿದೆ.ಇದೇ ರೀತಿಯ ಕಾರ್ಯಕ್ರಮಗಳು ಕ್ಷೇತ್ರದ ಇನ್ನಿತರ ಕಡೆಯೂ ಬುಡಕಟ್ಟು ನಿವಾಸಿಗಳು ಇರುವಂತಹ ಜಾಗದಲ್ಲಿ ಮಾಡುವುದು ಉತ್ತಮ ಎಂದು ಸಲಹೆ ನೀಡಿದ ಮಾನ್ಯ ಶಾಸಕರು, ಬುಡಕಟ್ಟು ಜನಾಂಗದವರಲ್ಲಿ ಅನೇಕ ಜನರು ಉನ್ನತ ಶಿಕ್ಷಣ ಮಾಡಿ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಇಂತಹವರನ್ನು ಮಾದರಿಯಾಗಿ ತಕೊಂಡು ಎಲ್ಲರೂ ಸಮಾಜದಲ್ಲಿ ಮುನ್ನಡೆಗೆ ಬರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.