Met Former CM Siddaramaiah, Sri Nijagunananda Mahaswamy and Minister K.S. Basavanthappa, 18/08/2026

ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರ ನಿವಾಸಕ್ಕೆ ಆಗಮಿಸಿದ, ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳನ್ನು ಹಾಗೂ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಕೆ.ಎಸ್ ಬಸವಂತಪ್ಪ ರವರನ್ನು ಭೇಟಿಯಾಗಿ ಮಾತನಾಡಿದ ಸಂದರ್ಭ.

 


Forest Minister Ramalinga Reddy Discusses Human-Animal Conflict and Jamma Land Issue, 18/08/2026

ಮಾನವ ಪ್ರಾಣಿ ಸಂಘರ್ಷ ಹಾಗೂ ಜಮ್ಮಾಮಲೆ ಸಮಸ್ಯೆ ಕುರಿತು ಇಂದು ಅರಣ್ಯ ಸಚಿವರಾದ ಸನ್ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ಅವರೊಂದಿಗೆ ವಿಸ್ತೃತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಿದೆ. ಈ ಸಂದರ್ಭದಲ್ಲಿ ಸಮಸ್ಯೆಯನ್ನು ಆಲಿಸಿ ಪೂರಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ಸದನ ಕಲಾಪ ಮುಗಿದ ಕೂಡಲೇ ಕೊಡಗಿಗೆ ಭೇಟಿ ನೀಡಿ ವಿವರ ಪಡೆದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಎಂದು ಭರವಸೆ ನೀಡಿದರು.


Constituency Leaders Welcome Political Secretary Ponnanna, 18/08/2026

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆ ಸ್ವೀಕರಿಸಿದ ಬಳಿಕ ಕೊಡಗು ಜಿಲ್ಲೆಗೆ ಆಗಮಿಸಿದ ನನ್ನನ್ನು, ಆತ್ಮೀಯವಾಗಿ ಬರಮಾಡಿಕೊಂಡ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು.


Immediate Government Action Sought on Kodagu’s Elephant-Human Conflict, 18/08/2026

ಆನೆ-ಮಾನವ ಸಂಘರ್ಷದಿಂದ ವಿರಾಜಪೇಟೆ ಮತ ಕ್ಷೇತ್ರದ ಜನ ಹಾಗೂ ಕೊಡಗು ಜಿಲ್ಲೆ ಅನುಭವಿಸುತ್ತಿರುವಂತ ವೇದನೆಯನ್ನು, ಕೊಡಗಿನ ಜನ ಅನುಭವಿಸುತ್ತಿರುವ ಸಮಸ್ಯೆಯನ್ನ, ಉಂಟಾಗುತ್ತಿರುವ ಪ್ರಾಣ ಹಾನಿ, ಬೆಳೆ ಹಾನಿಯನ್ನ ಮುಂದಿನ ದಿನಗಳಲ್ಲಿ ಸರಿಪಡಿಸುವ ನಿಟ್ಟಿನಲ್ಲಿ ಶೂನ್ಯ ವೇಳೆಯಲ್ಲಿ ಸದನದ ಗಮನ ಸೆಳೆದು, ರಾಜ್ಯ ಸರಕಾರ ತಕ್ಷಣವೇ ಸ್ಪಂದಿಸಬೇಕೆಂದು ಪ್ರಸ್ತಾಪಿಸಿದೆ. ಹಾಗೆಯೇ ಇದು ಕೇಂದ್ರ ಹಾಗೂ ರಾಜ್ಯ ಇಬ್ಬರ ಹೊಣೆಯಾಗಿರುತ್ತದೆಂದು ಪ್ರಸ್ತಾಪಿಸಲಾಯಿತು. ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ತಂದಿದ್ದರೂ ಸಹ, ಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿರಲಿಲ್ಲ ಹಾಗೂ ಕೇಂದ್ರ ಸರ್ಕಾರದ ಕೊಡುಗೆ ಕರ್ನಾಟಕಕ್ಕೆ ಸೀಮಿತವಾದಂತೆ ಶೂನ್ಯವಾಗಿರುತ್ತದೆ ಎಂಬ ವಿಚಾರವನ್ನು ಪ್ರಸ್ತಾಪಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆ ಸೇರಿ ಪರಿಹಾರ ಕಂಡುಕೊಳ್ಳಬೇಕೆಂಬ ವಿಚಾರವನ್ನು ಸಹ ಮಂಡಿಸಿದೆ. ಇಂತಹ ಗಂಭೀರ ವಿಷಯವನ್ನು ಸದನದಲ್ಲಿ ಮಂಡನೆ ಮಾಡುತ್ತಿದ್ದರು ಸಹ, ತನ್ನದೇ ಆದಂತಹ ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿದಂತಹ ವಿರೋಧಪಕ್ಷಗಳು ಜನರ ಸಮಸ್ಯೆಯನ್ನ ಚರ್ಚೆ ಮಾಡಲು ಅವಕಾಶ ಮಾಡುತ್ತಿಲ್ಲ ಎಂದು ಬಿಜೆಪಿಯ ನಡೆಯ ಬಗ್ಗೆ ಸಮಾಧಾನ ವ್ಯಕ್ತಪಡಿಸಿ, ಮಾನ್ಯ ರಾಜ್ಯ ಸಚಿವರು ತಕ್ಷಣ ಸ್ಪಂದಿಸಬೇಕು, ಕ್ಷೇತ್ರಕ್ಕೆ ಭೇಟಿ ನೀಡಬೇಕೆಂದು ಒತ್ತಾಯಿಸಿದೆ. ಅರಣ್ಯ ಸಚಿವರ ಪರವಾಗಿ ಮಾನ್ಯ ಸಚಿವರಾದ ಕೃಷ್ಣ ಬೈರೇಗೌಡರು ತಕ್ಷಣವೇ ಉತ್ತರ ನೀಡಿರುತ್ತಾರೆ. ಜಿಲ್ಲೆಯಲ್ಲಿ ನಾಟಕವಾದಂತಹ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯವರು ಈ ವಿಷಯವನ್ನು ಪ್ರಸ್ತಾಪ ಮಾಡಿಸುವ ಸಂದರ್ಭದಲ್ಲಿ ಸದನ ಅಡ್ಡಿಪಡಿಸಿರುವಂಥದ್ದು ನಿಜವಾಗಲೂ ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಭಾರತೀಯ ಜನತಾ ಪಕ್ಷದ ನಾಟಕವನ್ನು ಬಯಲು ಮಾಡಿರುತ್ತದೆ ಎಂಬುದು ಸ್ಪಷ್ಟ.

 


Congratulations to Mankala Vaidya and Umashree on their election as Legislative Assembly Vice Presidents., 18/08/2026

ವಿಧಾನಸಭೆಯ ನೂತನ ಉಪ ಸಭಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಮಂಕಾಳ ವೈದ್ಯ ಹಾಗೂ ವಿಧಾನಪರಿಷತ್ ಉಪ ಸಭಾಪತಿಗಳಾಗಿ ಆಯ್ಕೆಯಾದ ಶ್ರೀಮತಿ ಉಮಾಶ್ರೀ ಅವರಿಗೆ ಹಾರ್ದಿಕ ಅಭಿನಂದನೆಗಳು.