Participated in Grand Ganeshotsava Celebrations in Gonikoppa and Titimati, 15/09/2026
ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪ, ತಿತಿಮತಿ ಭಾಗಗಳಲ್ಲಿ ಅದ್ದೂರಿಯಿಂದ ಹಾಗೂ ಅತ್ಯಂತ ಭಕ್ತಿ ಭಾವದಿಂದ ಆಚರಿಸುತ್ತಿರುವ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿ ನಾಡಿನ ಶಾಂತಿ ಸುಭಿಕ್ಷೆಗಾಗಿ ಬೇಡಿಕೊಳ್ಳಲಾಯಿತು.

Participated in the book release function organized by Jabboomi Charitable Trust (R) at Kodava Samaj Ponnampete, on the occasion of release of the book composed by Aithichanda Ramesh Uttappa., 15/09/2026
ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ (ರಿ) ರವರು ಕೊಡವ ಸಮಾಜ ಪೊನ್ನಂಪೇಟೆಯಲ್ಲಿ ಆಯೋಜಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ, ಐತಿಚಂಡ ರಮೇಶ್ ಉತ್ತಪ್ಪರವರು ರಚಿಸಿದ ಪುಸ್ತಕವನ್ನು ಬಿಡುಗಡೆಗೊಳಿಸಿದ ಸಂದರ್ಭ.

Bhoomi Pooja Held for New Hockey Turf in Ponnampete, 15/09/2026
ಪೊನ್ನಂಪೇಟೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಹಾಕಿ ಟರ್ಫ್ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನನ್ನೊಂದಿಗೆ ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷರಾದ ಶ್ರೀ ಅಜ್ಜಿಕುಟ್ಟಿರ ನರೇನ್ ಎಸ್ ಕಾರ್ಯಪ್ಪ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಧ್ಯಕ್ಷರಾದ ಚಪ್ಪಡಿರ ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಬ್ಲಾಕ್ ಮಹಿಳಾ ಅಧ್ಯಕ್ಷರಾದ ಆಶಾ ಪೂಣಚ್ಚ, ಹಿರಿಯರಾದ ಮುಕಳೇರ ಕುಶಾಲಪ್ಪ, ವಾಸು ಕುಟ್ಟಪ್ಪ, ಒಲಂಪಿಯನ್ ಬಾಳೇಯಾಡ ಸುಬ್ರಮಣಿ , ಚೆಪ್ಪುಡೀರ ಪೂಣಚ್ಚ, ಅಜ್ಜಿಕುಟ್ಟಿರ ಕುಟುಂಬದ ಸರ್ವ ಸದಸ್ಯರು, ಅಧಿಕಾರಿ ವರ್ಗದವರು, ಪಕ್ಷದ ಮುಖಂಡರು ,ಕಾರ್ಯಕರ್ತರು ಉಪಸ್ಥಿತರಿದ್ದು ಈ ಶುಭ ಸಮಾರಂಭಕ್ಕೆ ಸಾಕ್ಷಿಯಾದರು.

Kaveri Dasara Committee Holds Gonikoppa Preliminary Meeting, 15/09/2026
ಕಾವೇರಿ ದಸರಾ ಸಮಿತಿ ಗೋಣಿಕೊಪ್ಪ ಇದರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮುಂಬರುವ ದಸರಾ ಆಚರಣೆಯ ಬಗ್ಗೆ ಚರ್ಚಿಸಿದೆ. ಈ ಸಮಿತಿಯ ಅಧ್ಯಕ್ಷನಾಗಿರುವ ನಾನು, ಈ ಬಾರಿಯ ದಸರಾ ಆಚರಣೆಯಲ್ಲಿ ಕೈಗೊಳ್ಳಬೇಕಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಈ ಉತ್ಸವವನ್ನು ಮತ್ತಷ್ಟು ಅದ್ದೂರಿಯಾಗಿ ನಡೆಸುವ ಕುರಿತು ಸಮಿತಿಯ ಸದಸ್ಯರೊಂದಿಗೆ ಹಾಗೂ ಕಾರ್ಯಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಅವರೊಂದಿಗೆ ಚರ್ಚಿಸಿದ ಸಂದರ್ಭ.

Engineers’ Day Celebrated in Honour of Sir M. Visvesvaraya, 15/09/2026
ನಾಡಿನ ಸಮಸ್ತ ಅಭಿಯಂತರರಿಗೆ
ಭಾರತ ರತ್ನ, ನಾಡಿನ ಹೆಮ್ಮೆಯ ಮೇಧಾವಿ, ವಿದ್ವಾಂಸ, ರಾಜನೀತಿಜ್ಞ, ಮೈಸೂರಿನ ದಿವಾನರಾಗಿದ್ದ ಹಾಗು ಆಧುನಿಕ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ
ಸರ್ ಎಂ. ವಿಶ್ವೇಶ್ವರಯ್ಯರವರ
ಜನ್ಮದಿನದ ಗೌರವಾರ್ಥ ಆಚರಿಸುವ
ಇಂಜಿನಿಯರ್ಗಳ ದಿನಾಚರಣೆಯ ಶುಭಾಶಯಗಳು''
