As promised in last year's God's festival, the moment today handed over to the committee personally by providing all the facilities required for the adorable God of Sri Tirumala Baraguru, Rashe Aigolli Jadali tribes., 19/04/2026

ಕಳೆದ ಸಾಲಿನ ದೇವರ ಉತ್ಸವದಲ್ಲಿ ವಾಗ್ದಾನ ನೀಡಿದಂತೆ, ಪೊನ್ನಂಪೆಟೆ ತಾಲೂಕು ನಾಗರಹೊಳೆಯಲ್ಲಿರುವ ಶ್ರೀ ತಿರುಮಲ ಬರಗೂರು, ರಾಶೆ ಐಗೊಲ್ಲಿ ಜಾಡಲಿ ಬುಡಕಟ್ಟು ಜನಾಂಗದವರ ಆರಾಧ್ಯ ದೇವರ ಅನ್ನದಾಸೋಹಕ್ಕೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ವೈಯುಕ್ತಿಕವಾಗಿ ಕಲ್ಪಿಸಿ ಇಂದು ಸಮಿತಿಯವರಿಗೆ ಹತ್ತಾಂತರಿಸಿದ ಸಂದರ್ಭ.


Super 9 tennis ball cricket tournament organized at Kutta primary school ground today in memory of late Mukkateera Sri Shivu Madappa., 19/04/2026

ದಿವಂಗತ ಮುಕ್ಕಾಟೀರ ಶ್ರೀ ಶಿವು ಮಾದಪ್ಪ ರವರ ಸ್ಮರಣಾರ್ಥವಾಗಿ ಇಂದು ಕುಟ್ಟ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜನೆಗೊಂಡ ಸೂಪರ್ 9 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭ ಕೋರಲಾಯಿತು.


Kodagu During the inauguration of new office, platform and cemetery premises wall and various development road works in Kondangeri built for Jumma Mosque in Aimangala., 19/04/2026

ಕೊಮ್ಮೆತ್ತೋಡು ಐಮಂಗಲದ ಜುಮ್ಮಾ ಮಸೀದಿಗೆ ನಿರ್ಮಿಸಿಕೊಟ್ಟ, ನೂತನ ಕಚೇರಿ, ವೇದಿಕೆ ಹಾಗೂ ಕಬರಸ್ಥಾನದ ಆವರಣ ಗೋಡೆ ಹಾಗೂ ಕೊಂಡಂಗೇರಿಯಲ್ಲಿ ವಿವಿಧ ಅಭಿವೃದ್ಧಿ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿದ ಸಂದರ್ಭ.


To all the people of the state Happy Akshaya Tritiya. I wish that the work you have done will be unlimited, may the luck of Lakshmini be blessed., 19/04/2026

ನಾಡಿನ ಸಮಸ್ತ ಜನತೆಗೆ
ಅಕ್ಷಯ ತೃತೀಯ ಹಾರ್ದಿಕ ಶುಭಾಶಯಗಳು.
ಈ ಶುಭ ದಿನದಂದು ನೀವು ಕೈಗೊಂಡ ಕಾರ್ಯ ಅಕ್ಷಯವಾಗಲಿ, ಅದೃಷ್ಟದ ಲಕ್ಷ್ಮಿನಿಮಗೆ ಒಲಿಯಲಿ ಎಂದು ಹಾರೈಸುವೆ

Commonwealth Law Education Association (CLEA) attended the International Conference at Shangrila Hotel in the city today: An agenda for India in 2047 with Hon'ble Chief Minister Shri Siddaramaiah on reshaping law, policy and innovation for fuel justice. A, 19/04/2026

ಕಾಮನ್‌ವೆಲ್ತ್ ಕಾನೂನು ಶಿಕ್ಷಣ ಸಂಘ (CLEA) ವತಿಯಿಂದ ಇಂದು ನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ಸುಸ್ಥಿರ ಶಕ್ತಿ: 2047 ರಲ್ಲಿ ಭಾರತಕ್ಕೆ ಒಂದು ಕಾರ್ಯಸೂಚಿ ಇಂಧನ ನ್ಯಾಯಕ್ಕಾಗಿ ಕಾನೂನು, ನೀತಿ ಮತ್ತು ನಾವೀನ್ಯತೆಯನ್ನು ಮರುರೂಪಿಸುವುದು ಕುರಿತು ಅಂತರರಾಷ್ಟ್ರೀಯ ಸಮ್ಮೇಳದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರೊಂದಿಗೆ ಭಾಗವಹಿಸಿದೆ.
ಈ ಸಮ್ಮೇಳದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀ ಸೂರ್ಯ ಕಾಂತ್, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಸಮ್ಮೇಳನ ಆಯೋಜನಾ ಸಮಿತಿಯ ಮುಖ್ಯ ಸಲಹೆಗಾರರಾದ ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ವಿಭು ಬಖ್ರು, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಸಮ್ಮೇಳನ ಆಯೋಜನಾ ಸಮಿತಿಯ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ಡಿ.ಕೆ. ಸಿಂಗ್, ಭಾರತೀಯ ಕಾನೂನು ಸಂಸ್ಥೆಯ ಹಿರಿಯ ಪ್ರಾಧ್ಯಾಪಕರು ಮತ್ತು ಸಮ್ಮೇಳನದ ಅಧ್ಯಕ್ಷರಾದ ಪ್ರೊ. ಡಾ. ಎಸ್. ಶಿವಕುಮಾರ್, ಇಂಧನ ಸಚಿವರಾದ ಕೆ.ಜೆ ಜಾರ್ಜ್, ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.