CRPF FOUNDATION DAY Strength in service. Courage in action. Honour in every step. Proudly saluting the indomitable spirit of the Central Reserve Police Force on its Foundation Day., 27/07/2026
CRPF FOUNDATION DAY
Strength in service. Courage in action. Honour in every step. Proudly saluting the indomitable spirit of the Central Reserve Police Force on its Foundation Day.

Bharat Ratna A.P.J Abdul Kalam Our tribute on his death anniversary., 27/07/2026
ಭಾರತದ ಮೊದಲ ಉಪಗ್ರಹ 'ರೋಹಿಣಿ' ಕಕ್ಷೆಗೆ ಸೇರುವ ಹಿಂದಿನ ಪ್ರೇರಕ ಶಕ್ತಿ, ಇಸ್ರೋ ಪಿಎಸ್ಎಲ್ವಿ ಕಾರ್ಯ ಯೋಜನೆಯ ರೂವಾರಿ, ದೇಶದ 11ನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ
ಭಾರತ ರತ್ನ ಎ.ಪಿ.ಜೆ ಅಬ್ದುಲ್ ಕಲಾಂ
ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ ನಮನಗಳು.

Participated in the Kodava book finding program organized by Kodava Sahitya Academy at Virajpet Taluk Ammati-Onti shop area and the book was released. Kodava Sahitya Academy is doing well wishing the program, playing a major role in bringing awareness abo, 26/07/2026
ವಿರಾಜಪೇಟೆ ತಾಲೂಕು ಅಮ್ಮತಿ -ಒಂಟಿಅಂಗಡಿ ಭಾಗದ ಕೊಡವ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ಕೊಡವ ಸಾಹಿತ್ಯ ಅಕಾಡೆಮಿ ರವರು ಆಯೋಜಿಸಿದ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮಕ್ಕೆ ಶುಭ ಕೋರುತ್ತಾ ಕೊಡವ ಸಾಹಿತ್ಯ ಅಕಾಡೆಮಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ಪೀಳಿಗೆಗೆ ಕೊಡವ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯ ಮಹತ್ವದ ಅರಿವು ಮೂಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪತ್ತಾಯ ಬಿಡುಗಡೆಯಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆದ ಸಂದರ್ಭದಲ್ಲಿ, ಸಮುದಾಯದ ಬಾಂಧವರಿಗೆ ನಮ್ಮ ಸಂಸ್ಕೃತಿಯ ಮಹತ್ವದ ಅರಿವಾಗುತ್ತದೆ. ಬಹು ಪುರಾತನವಾದ ಕೊಡವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಮಹತ್ತರ ಜವಾಬ್ದಾರಿ ಕೇವಲ ಅಕಾಡೆಮಿಗೆ ಮಾತ್ರವಲ್ಲದೆ ಜನಾಂಗದ ನಮ್ಮೆಲ್ಲರಿಗೂ ಸಮಾನವಾಗಿ ಇದೆ. ನಮ್ಮ ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗೂ ಆಚಾರ-ವಿಚಾರಗಳನ್ನು ನಮ್ಮ ಯುವ ಪೀಳಿಗೆಗೆ ತಿಳಿಸುತ್ತಾ, ಅವರ ಮುಂದಿನ ಭವಿಷ್ಯದಲ್ಲಿ ಅದನ್ನು ಬೆಳೆಸುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ಎಲ್ಲರಲ್ಲಿ ವಿನಂತಿಸಲಾಯಿತು.

Kargil Victory Divas Today is a historical day where our brave soldiers sacrifice, sacrifice and bravery sacrificed their lives and made the country win and flying India's honor to the top. Let us celebrate the historic victory of our army. Let us pay tri, 26/07/2026
ಕಾರ್ಗಿಲ್ ವಿಜಯ್ ದಿವಸ್
ನಮ್ಮ ವೀರ ಯೋಧರ ತ್ಯಾಗ, ಬಲಿದಾನ ಹಾಗೂ ಶೌರ್ಯದಿಂದ ಪ್ರಾಣ ಅರ್ಪಿಸಿ ದೇಶ ಗೆಲ್ಲಿಸಿ, ಭಾರತಾಂಬೆಯ ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿದ ಐತಿಹಾಸಿಕ ದಿನವಿಂದು. ನಮ್ಮ ಸೈನ್ಯದ ಐತಿಹಾಸಿಕ ವಿಜಯವನ್ನು ಸಂಭ್ರಮಿಸೋಣ. ಅಂದು ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸೋಣ.

Central BJP government and Delhi police, students peacefully participated in a massive protest organized by Ponnampete Block Committee today to condemn the atrocities on students and to show support to students., 26/07/2026
ಕೇಂದ್ರ ಬಿಜೆಪಿ ಸರಕಾರ ಮತ್ತು ದೆಹಲಿ ಪೊಲೀಸರು, ವಿದ್ಯಾರ್ಥಿಗಳು ಶಾಂತಿಯುತವಾಗಿ ನೀಟ್ ಹಗರಣದ ವಿರುದ್ಧ ಕೈಗೊಂಡ ಪ್ರತಿಭಟನೆ ಸಂದರ್ಭ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿರುವದನ್ನು ಖಂಡಿಸಿ ಹಾಗೂ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸುವ ಸಲುವಾಗಿ, ಇಂದು ಪೊನ್ನಂಪೇಟೆ ಬ್ಲಾಕ್ ಸಮಿತಿ ವತಿಯಿಂದ ಆಯೋಜನೆಗೊಂಡ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು.
