I am pleased to have been appointed as the Hon’ble Chief Minister’s Political Secretary. I sincerely thank Hon’ble Chief Minister Shri D.K. Shivakumar and look forward to successfully fulfilling this important responsibility., 13/08/2026
ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದು ಅತ್ಯಂತ ಸಂತಸ ತಂದಿದೆ. ನನಗೆ ಕೊಟ್ಟಿರುವ ಅತ್ಯಂತ ಮಹತ್ವದ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂಬ ಭರವಸೆಯೊಂದಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು ಅರ್ಪಿಸುತ್ತಿದ್ದೇನೆ.

World Elephant Day: Protecting Elephants and Their Habitats, 13/08/2026
ವಿಶ್ವ ಆನೆ ದಿನ
ದೇಶದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ ಮಾನವಸ್ನೇಹಿ ಗಜರಾಜನ ಸಂರಕ್ಷಣೆ ಹಾಗೂ ಅವುಗಳ ಆವಾಸಸ್ಥಾನಗಳ ರಕ್ಷಣೆ ನಮ್ಮೆಲ್ಲರ ಹೊಣೆ.

International Youth Day: Inspiring youth to drive progress and build a brighter nation. – 13/08/2026, 13/08/2026
ಅಂತರಾಷ್ಟ್ರೀಯ ಯುವ ದಿನ
ದೇಶದ ಬೆಳವಣಿಗೆಯ ಶಕ್ತಿಯಾಗಿರುವ ಯುವ ಸಮುದಾಯಕ್ಕೆ ಉಜ್ವಲ ದೇಶ ಕಟ್ಟಲು ಪ್ರೇರೇಪಿಸೋಣ.

Participated in Atidonji Day heritage festival after Kodagu Billava Samaja Bhavan Bhoomi Pooja, 12/08/2026
ಕೊಡಗು ಬಿಲ್ಲವ ಸಮಾಜದವರು ಆಯೋಜಿಸಿದ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಿದ ಬಳಿಕ, ಸ್ಥಳೀಯ ಪಾರಂಪರಿಕ ಹಬ್ಬವಾದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

Chetan Changappa Makes Kodagu Proud at Rainforest Challenge India, 12/08/2026
ಇತ್ತಿಚೆಗೆ ಗೋವಾದಲ್ಲಿ ಮುಕ್ತಾಯಗೊಂಡ ಅಂತರಾಷ್ಟ್ರೀಯ ಆಫ್ ರೋಡ್ ಚಾಲೆಂಜ್ ಆಫ್ ಮಲೇಷ್ಯಾ ಇವರ ಪ್ರತಿಯೋಗಿತದಲ್ಲಿ ನಡೆದ ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ 4×4 ರಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ಭಾರತಕ್ಕೆ ಹೆಮ್ಮೆ ತಂದ ಕೊಡಗಿನ ವಿರಾಜಪೇಟೆ ತಾಲೂಕು ಅಮ್ಮತಿ ಭಾಗದ ಉದ್ದಾಪಂಡ ಚೇತನ್ ಚಂಗಪ್ಪ ರವರನ್ನು ನನ್ನ ಗೃಹ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಬಳಿಕ ಶುಭ ಕೋರುತ್ತಾ ಮುಂದಿನ ದಿನಗಳಲ್ಲಿ ಮತ್ತಷ್ಟು ಉನ್ನತ ಸಾಧನೆ ಮಾಡಿ ನಾಡಿಗೆ ಹಾಗೂ ದೇಶಕ್ಕೆ ಕೀರ್ತಿ ತರುವಂತಹ ಯಶಸ್ಸು ದೊರಕಲಿ ಎಂದು ಹಾರೈಸಿದೆ.
