Tribute to Pandit Jawaharlal Nehru: Architect of Socialist, Secular, and Democratic India, 27/05/2025
ಸ್ವಾತಂತ್ರ್ಯ ಹೋರಾಟಗಾರರಾಗಿ, ದೇಶದ ಮೊದಲ ಪ್ರಧಾನಿಯಾಗಿ ಭಾರತವನ್ನು ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಟ್ಟಿಬೆಳೆಸುವಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ ಕೊಡುಗೆ ಅನನ್ಯ, ಅದ್ವಿತೀಯ. ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆಯ ಈ ದಿನ ಅವರ ಜೀವನಾದರ್ಶಗಳನ್ನು ನೆನೆದು ಗೌರವ ನಮನ ಸಲ್ಲಿಸೋಣ.

Paid final respects to the mother of Karnataka State Urban Development Minister Shri Byrathi Suresh and offered condolences to the minister and his family, 24/05/2025
ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರತಿ ಸುರೇಶ್ ರವರ ತಾಯಿಯ ಆಂತಿಮ ದರ್ಶನ ಪಡೆದು ಸಚಿವರಿಗೆ ಮತ್ತು ಆವರ ಕುಟುಂಬಕ್ಕೆ ಸಾಂತ್ವನ ಹೇಳಿದೆ.

On the occasion of the unveiling of the logo for Thok Namme 2025, a gun shooting competition among Kodava families organized by Pemmanda Vakk Thuchmakeri, 23/05/2025
ಜೂನ್ 7 ಹಾಗೂ 8 ರಂದು, ಜೂನಿಯರ್ ಕಾಲೇಜ್ ಮೈದಾನ ಪೊನ್ನಂಪೇಟೆಯಲ್ಲಿ, ಪೆಮ್ಮಂಡ ವಕ್ಕ ತೂಚಮಕೇರಿ ಇವರ ವತಿಯಿಂದ ಆಯೋಜಿಸಿರುವ ಕೊಡವ ಕುಟುಂಬಗಳ ನಡುವಿನ *ತೋಕ್ ನಮ್ಮೆ 2025* ಗುಂಡು ಹೊಡೆಯುವ ಸ್ಪರ್ಧೆಯ ಲಾಂಛನವನ್ನು ಇಂದು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಅನಾವರಣ ಮಾಡಿದ ಸಂದರ್ಭ.

TV 1 NEWS UPDATE, 23/05/2025
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರ ಭೇಟಿ
-------------------
ವಿರಾಜಪೇಟೆ
ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿ ಕುಟ್ಟಿರ.ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಇಂದು ಕೊಡಗಿನ ಕಾಂಗ್ರೆಸ್ ನಾಯಕರುಗಳ ನಿಯೋಗವು ಹಲವು ಬೇಡಿಕೆಗಳೊಂದಿಗೆ ಮುಜುರಾಯಿ ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ರಾಮಲಿಂಗ ರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಪ್ರಮುಖವಾಗಿ ಕೊಡಗಿನ ದೇವಸ್ಥಾನಗಳ ಅಭಿವೃದ್ಧಿಗೆ ಹಾಗು ಗ್ರಾಮೀಣ ಪ್ರದೇಶಗಳಿಗೆ ಹೊಸ ಬಸ್ ಮಾರ್ಗಗಳನ್ನು ನೀಡುವ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಮಾನ್ಯ ಸಚಿವರು ಪೂರಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಾನಂಡ ಪ್ರತ್ಯು, ದೇವಸ್ಥಾನದ ಅಧ್ಯಕ್ಷರಾದ ಅದೇಂಗಡ ವಾಸು ಬೆಳ್ಳಿಯಪ್ಪ, ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯ ಅದೇಂಗಡ ವಿನು ಉತ್ತಪ್ಪ ಉಪಸ್ಥಿತರಿದ್ದರು.
-------------------
ವಿರಾಜಪೇಟೆ
ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿ ಕುಟ್ಟಿರ.ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಇಂದು ಕೊಡಗಿನ ಕಾಂಗ್ರೆಸ್ ನಾಯಕರುಗಳ ನಿಯೋಗವು ಹಲವು ಬೇಡಿಕೆಗಳೊಂದಿಗೆ ಮುಜುರಾಯಿ ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ರಾಮಲಿಂಗ ರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಪ್ರಮುಖವಾಗಿ ಕೊಡಗಿನ ದೇವಸ್ಥಾನಗಳ ಅಭಿವೃದ್ಧಿಗೆ ಹಾಗು ಗ್ರಾಮೀಣ ಪ್ರದೇಶಗಳಿಗೆ ಹೊಸ ಬಸ್ ಮಾರ್ಗಗಳನ್ನು ನೀಡುವ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಮಾನ್ಯ ಸಚಿವರು ಪೂರಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಾನಂಡ ಪ್ರತ್ಯು, ದೇವಸ್ಥಾನದ ಅಧ್ಯಕ್ಷರಾದ ಅದೇಂಗಡ ವಾಸು ಬೆಳ್ಳಿಯಪ್ಪ, ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯ ಅದೇಂಗಡ ವಿನು ಉತ್ತಪ್ಪ ಉಪಸ್ಥಿತರಿದ್ದರು.

Heart Lamp Wins 2025 International Booker – Congratulations to Banu Mushtaq & Deepa Bhasthi, 22/05/2025
ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ - 2025 ವಿಜೇತರಾದ ಬಾನು ಮುಷ್ತಾಕ್ ಹಾಗೂ ದೀಪ ಭಾಸ್ತಿ ರವರಿಗೆ ಅಭಿನಂದನೆಗಳು.
ಕನ್ನಡದ ಹೆಸರಾಂತ ಲೇಖಕಿಯರಾದ ಬಾನು ಮುಸ್ತಾಕ್ ಹಾಗೂ ದೀಪಾ ಭಾಸ್ತಿ ರವರ ರಚನೆಯಾದ ಹಾರ್ಟ್ ಲ್ಯಾಂಪ್ ಎಂಬ ಸಣ್ಣ ಕಥೆಗಳ ಸಂಕಲನಕ್ಕೆ, 2025 ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ನಮಗೆಲ್ಲರಿಗೂ ಹೆಮ್ಮೆ ಮೂಡಿಸಿದೆ. ಪ್ರತಿಯೊಬ್ಬ ಲೇಖಕನ ಕನಸಾಗಿರುವ ಬೂಕರ್ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗರು ಎಂಬ ಹಿರಿಮೆ ಇವರ ಪಾಲಾಗಿರುವುದು ನಾಡಿಗೆ ಕೀರ್ತಿ ತಂದುಕೊಟ್ಟಿದೆ.
ಮಡಿಕೇರಿ ಮೂಲದ ಲೇಖಕಿ ಹಾಗೂ ಪತ್ರಕರ್ತೆಯಾದ ದೀಪ ಭಾಸ್ತಿ ರವರು, ಬಾನು ಮುಸ್ತಾಕ್ ರವರ ರಚಿತ ಹಾರ್ಟ್ ಲ್ಯಾಂಪ್ ಎಂಬ ಕಥಾ ಸಂಕಲನವನ್ನು, ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದರು.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಕೊಡಗು ಮೂಲದ ದೀಪ ಭಾಸ್ತಿ ಹಾಗೂ ಕನ್ನಡತಿ ಬಾನು ಮುಸ್ತಾಕ್ ರವರಿಗೆ ಮತ್ತೊಮ್ಮೆ ಅಭಿನಂದನೆಗಳು.
ಕನ್ನಡದ ಹೆಸರಾಂತ ಲೇಖಕಿಯರಾದ ಬಾನು ಮುಸ್ತಾಕ್ ಹಾಗೂ ದೀಪಾ ಭಾಸ್ತಿ ರವರ ರಚನೆಯಾದ ಹಾರ್ಟ್ ಲ್ಯಾಂಪ್ ಎಂಬ ಸಣ್ಣ ಕಥೆಗಳ ಸಂಕಲನಕ್ಕೆ, 2025 ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ನಮಗೆಲ್ಲರಿಗೂ ಹೆಮ್ಮೆ ಮೂಡಿಸಿದೆ. ಪ್ರತಿಯೊಬ್ಬ ಲೇಖಕನ ಕನಸಾಗಿರುವ ಬೂಕರ್ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗರು ಎಂಬ ಹಿರಿಮೆ ಇವರ ಪಾಲಾಗಿರುವುದು ನಾಡಿಗೆ ಕೀರ್ತಿ ತಂದುಕೊಟ್ಟಿದೆ.
ಮಡಿಕೇರಿ ಮೂಲದ ಲೇಖಕಿ ಹಾಗೂ ಪತ್ರಕರ್ತೆಯಾದ ದೀಪ ಭಾಸ್ತಿ ರವರು, ಬಾನು ಮುಸ್ತಾಕ್ ರವರ ರಚಿತ ಹಾರ್ಟ್ ಲ್ಯಾಂಪ್ ಎಂಬ ಕಥಾ ಸಂಕಲನವನ್ನು, ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದರು.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಕೊಡಗು ಮೂಲದ ದೀಪ ಭಾಸ್ತಿ ಹಾಗೂ ಕನ್ನಡತಿ ಬಾನು ಮುಸ್ತಾಕ್ ರವರಿಗೆ ಮತ್ತೊಮ್ಮೆ ಅಭಿನಂದನೆಗಳು.
