20th Kodava Cricket Namme Porkuvanda Cup, 30/05/2022

ಇಪ್ಪತ್ತನೇ ಕೊಡವ ಕ್ರಿಕೆಟ್ ನಮ್ಮೆ ಪೋರ್ಕುವಂಡ ಕಪ್ ಫೈನಲ್ಸ್ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಧರ್ಭ.
 
ಕೊಡಗಿನ ಖಾಸಗಿ ಕ್ರೀಡಾ ಪಂದ್ಯಾವಳಿಗಳಲ್ಲಿ ಒಂದು ಮುಖ್ಯ ಸ್ಥಾನ ಪಡೆದಿರುವ ಪಂದ್ಯಾವಳಿ ಇದು. ಈ ವರ್ಷದ ಫೈನಲ್ಸ್ ಪಂದ್ಯಾವಳಿ ಅತಿ ಹೆಚ್ಚು ಮಳೆ ಬಂದ ಸಂದರ್ಭದಲ್ಲೂ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿಭಾಯಿಸಿದ ಆಯೋಜಕರಿಗೆ ನನ್ನ ಅಭಿನಂದನೆಗಳು.
 
ಕ್ರೀಡೆ ಕೊಡಗಿನ ಸಂಸ್ಕೃತಿಯ ಅವಿಭಾಜ್ಯ ಅಂಗ. ಇದನ್ನು ಬೆಳೆಸಿ ಪ್ರೋತ್ಸಾಹಿಸುತ್ತಿರುವ ಎಲ್ಲರೂ ಅಭಿನಂದನಾರ್ಹರು. ಕೂಟದಲ್ಲಿ ಪಾಲ್ಗೊಂಡ ಮತ್ತು ಕ್ರೀಡಾ ಮನೋಭಾವ ತೋರಿದ ಎಲ್ಲಾ ಕ್ರೀಡಾಪಟುಗಳಿಗೂ ಕೂಡ ಅಭಿನಂದನೆಗಳು.
 
#Kodagu #Coorg #Virajpet #Ponnampet #Kushalnagar #Madikeri #Jodupatti #PoutiKatha
 
 
img
 

Champions League Cricket at Gonnikoppal, 27/05/2022

ಗೋಣಿಕೊಪ್ಪಲುವಿನಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಪಂದ್ಯ ವೀಕ್ಷಿಸಲು ಮತ್ತು ಪ್ರಶಸ್ತಿ ವಿತರಿಸಲು ಭೇಟಿ ಕೊಟ್ಟ ಸಂಧರ್ಭ.
 
ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿ ನಿರ್ವಹಣೆ ಮಾಡಿದ ಆಯೋಜಕರಿಗೆ ನನ್ನ ಅಭಿನಂದನೆಗಳು. ಅದೇ ರೀತಿ ಪಂದ್ಯಗಳಲ್ಲಿ ಸ್ಪರ್ದಾ ಮನೋಭಾವದಿಂದ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೂ ನನ್ನ ಅಭಿನಂದನೆಗಳು.
 
ಅತಿ ಹೆಚ್ಚು ಕ್ರೀಡಾ ಪಂದ್ಯವಳಿಗಳನ್ನು ಆಯೋಜಿಸುವ ಕೊಡುಗು ಜಿಲ್ಲೆ ಅತಿ ಹೆಚ್ಚು ಕ್ರೀಡಾಪಟುಗಳನ್ನು ಕೊಡುಗೆಯಾಗಿ ಕೊಟ್ಟಿದೆ. ಹಾಕಿ, ಫುಟ್ಬಾಲ್, ಕ್ರಿಕೆಟ್ ಯಾವುದೇ ಕ್ರೀಡೆಯಾಗಲಿ, ಕೊಡಗು ಜಿಲ್ಲೆಯ ಕ್ರೀಡಾಪಟುಗಳಿಗೆ ಈ ರೀತಿಯ ಪಂದ್ಯಾವಳಿಗಳಿಂದ ಪ್ರೋತ್ಸಾಹ ದೊರೆತಿದೆ.
 
ಪಂದ್ಯಾವಳಿಯ ವೇದಿಕೆಯಲ್ಲೇ ನನ್ನನು ಸನ್ಮಾನಿಸಿದ ಆಯೋಜಕರಿಗೆ ಮತ್ತೊಮ್ಮೆ ಧನ್ಯವಾದಗಳು.
 
#Kodagu #Coorg #Madikeri #Kushalnagar #Ponnampet #Virajpet #Gonikoppal #Cricket #Sports
 
 
img
 

Meeting with Ponnampet Thashildar regarding Pauthi Katha and Jodupatti temple, 26/05/2022

ಪೊನ್ನಂಪೇಟೆ ಮಾನ್ಯ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಇನ್ನೂ ಬಾಕಿ ಉಳಿದಿರುವ ಪೌತಿ ಖಾತಾಗಳನ್ನು ಪೂರ್ಣಗೊಳಿಸಲು ಅವರಿಗೆ ಒತ್ತಾಯ ಮಾಡಲಾಯಿತು. ಪೌತಿ ಖಾತೆ ನಿಯಮಗಳನ್ನು ಸರಳೀಕರಿಸಿರುವುದರ ಉಪಯೋಗ ಜನ ಸಾಮಾನ್ಯರಿಗೆ ಆಗಬೇಕು. ಬಾಕಿ ಉಳಿದಿರುವ ಎಲ್ಲಾ ಖಾತಾಗಳ ಕೆಲಸಗಳು ಆದಷ್ಟು ಬೇಗ ಮುಗಿಸುವಂತೆ ಅವರಿಗೆ ಮನವರಿಕೆ ಮಾಡಲಾಯಿತು. ಇದೇ ಸಂಧರ್ಭದಲ್ಲಿ ಜೋಡುಪಟ್ಟಿ ದೇವಾಲಯದ RTC ಯನ್ನು ಮಾಡಿಕೊಡುವಂತೆ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಕೊಡಲಾಗಿದೆ. ಆದಷ್ಟು ಬೇಗ ದೇವಾಲಯದ ಭಕ್ತರ ಮನವಿ ಪೂರ್ಣಗೊಳ್ಳುವ ಭರವಸೆ ಇದೆ. #Kodagu #Coorg #Virajpet #Ponnampet #Kushalnagar #Madikeri #Jodupatti #PoutiKatha
 
 
img
 

Inauguration of developmental works in Sampaje , 24/05/2022

ಸಂಪಾಜೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ಮತ್ತು ಕೆಪಿಸಿಸಿಯ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಅವರು ಪಾಲ್ಗೊಂಡಿದ್ದರು. ಕೊಡಗಿನಲ್ಲಿ ಆಗಬೇಕಿರುವ ಹಲವಾರು ಮೂಲಭೂತ ಸೌಕರ್ಯಗಳ ಕೆಲಸಗಳು, ಅಭಿವೃದ್ಧಿ ಕಾಮಗಾರಿಗಳು, ಸಾಮಾನ್ಯ ಜನರ ಸಮಸ್ಯೆ, ಬೆಳೆಗಾರರ ಸಮಸ್ಯೆ, ಪಕ್ಷದ ಸಂಘಟನೆ ಇನ್ನು ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿ ಅವರೊಂದಿಗೆ ಚರ್ಚಿಸುವ ಅವಕಾಶವೂ ಈ ಸಂದರ್ಭದಲ್ಲಿ ಒದಗಿಬಂತು. ಜಿಲ್ಲೆಯ ಅಭಿವೃದ್ದಿ ಬಗ್ಗೆ ಅವರಿಬ್ಬರಿಗೂ ಇರುವ ಕಾಳಜಿಗೆ ನನ್ನ ಧನ್ಯವಾದಗಳು. #Kodagu #Coorg #Virajpet #Ponnampet #Kushalnagar #Madikeri #Sampaje
 
 
img
 

Inauguration of Sahara Club Cricket finals in Chennayanakote, 23/05/2022

ಚೆನ್ನಯ್ಯನಕೋಟೆಯಲ್ಲಿ ಸಹಾರ ಕ್ಲಬ್'ನ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಉದ್ಘಾಟನೆ ಮಾಡಿ ಪ್ರಶಸ್ತಿ ವಿತರಣೆ ಮಾಡಿದೆ. ಈ ಸಂದರ್ಭದಲ್ಲಿ ಒಂದು ಅದ್ಭುತವಾದ ಕ್ರಿಕೆಟ್ ಪಂದ್ಯವನ್ನು ವೀಕ್ಷಣೆ ಮಾಡುವ ಅವಕಾಶ ಒದಗಿಬಂತು. ಬಹಳ ಅಚ್ಚುಕಟ್ಟಾಗಿ ಕ್ಲಬ್'ನ ಯುವಕರು ಪಂದ್ಯಾವಳಿಯನ್ನು ಆಯೋಜಿಸಿದ್ದರು. ಅಷ್ಟೇ ಉತ್ಸಾಹ ಮತ್ತು ಕ್ರೀಡಾ ಮನೋಭಾವದಿಂದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಕ್ರೀಡೆಗಳ ಉದ್ದೇಶ ಕೇವಲ ದೇಹದಂಡನೆಯಲ್ಲ. ಮನೋಲ್ಲಾಸ, ಪರಸ್ಪರ ಸಹಕಾರ, ಒಗ್ಗಟ್ಟು, ಜೀವನದಲ್ಲಿ ಬೇಕಾದ ಶಿಸ್ತು, ಸಂಯಮ ಎಲ್ಲವನ್ನು ಅದು ಕಲಿಸುತ್ತದೆ. ಪಂದ್ಯಾವಳಿಯ ಆಯೋಜಕರಿಗೂ, ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ನನ್ನ ಅಭಿನಂದನೆಗಳು. #Kodagu #Coorg #Virajpet #Ponnampet #Madikeri #Kushalnagar #Sports #Cricket #Channayanakote #Forest #Jungle
 
 
img