Media reports on former PM Rajiv Gandhi's anniversary remembrance programme, 06/06/2022
ಮಾಜಿ ಪ್ರಧಾನಮಂತ್ರಿ ಶ್ರೀ ರಾಜೀವ್ ಗಾಂಧಿ ಅವರ 31ನೇ ಪುಣ್ಯ ಸ್ಮರಣೆ ಅಂಗವಾಗಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇತ್ತೀಚೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿ ಪಕ್ಷದಲ್ಲಿ ಯಾವುದೇ ಆಂತರಿಕ ಸಮಸ್ಯೆ ಇದ್ದರು ಅದನ್ನು ಬದಿಗೊತ್ತಿ ಪಕ್ಷದ ಸಂಘಟನೆಯಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ ಬಗ್ಗೆ ಮಾತನಾಡಿದೆ.
ಯಾವುದೇ ಕಾರ್ಯಕರ್ತ ಅಥವಾ ವ್ಯಕ್ತಿ ನಿಷ್ಠೆಯಿಂದ ಪಕ್ಷದ ಕೆಲಸ ಮಾಡಿದಲ್ಲಿ, ಪಕ್ಷವು ಅವರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತದೆ ಎನ್ನುವ ಮಾತನ್ನು ತಿಳಿಸಿದೆ.
ರಾಜೀವ್ ಗಾಂಧಿಯವರು ಪ್ರಧಾನಿಯಾಗಿ ದೇಶದ ಪ್ರಗತಿಗೆ ಕೊಟ್ಟ ಕೊಡುಗೆಯನ್ನು ಈ ಸಂಧರ್ಭದಲ್ಲಿ ಸ್ಮರಿಸಿದೆ. ಮಾಹಿತಿ ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಭಾರತಕ್ಕೆ ಅವರ ಕೊಡುಗೆ ಪ್ರಾಥಃಸ್ಮರಣೀಯ.
ಕಾರ್ಯಕ್ರಮದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಪಾಲ್ಗೊಂಡಿದ್ದರು.
#Kodagu #Coorg #Virajpet #Madikeri #Kushalnagar #Ponnampet

Inauguration of Kolakeri grama Bhagwati temple's diamond jubilee hall, 05/06/2022
ಕೊಳಕೆರಿ ಗ್ರಾಮದ ಶ್ರೀ ಭಗವತಿ ದೇವಸ್ಥಾನದ ವಜ್ರ ಮಹೋತ್ಸವ ಸಭಾಂಗಣದ ಉದ್ಘಾಟನೆ ಮಾಡುವ ಅವಕಾಶ ನನಗೆ ಆ ದೇವರ ಕೃಪೆಯಿಂದ ಒದಗಿಬಂತು.
ಈ ಪುಣ್ಯದ ಕೆಲಸದಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಮಾಡಿಕೊಟ್ಟ ದೇವಸ್ಥಾನದ ಆಡಳಿತ ಮಂಡಳಿ, ಮುಖಂಡರು ಹಾಗೂ ಭಕ್ತಾದಿಗಳಿಗೆ ವಂದನೆಗಳು. ದೇವರ ಇಚ್ಛೆಯಂತೆ ನನ್ನ ಕೈಯಲ್ಲಿ ಈ ಕಾರ್ಯವಾದುದ್ದು ನನ್ನ ಪುಣ್ಯ.
ನೂತನ ಸಭಾಂಗಣದಲ್ಲಿ ಭಕ್ತಾದಿಗಳಿಗೆ ಅನುಕೂಲವಾಗುವಂತಹ ಚಟುವಟಿಕೆಗಳು ನಡೆಯುವುದು ಸಂತಸದ ವಿಷಯವಾಗಿದೆ. ದೇವರ ಕೃಪೆ ಎಲ್ಲರ ಮೇಲಿರಲಿ ಎಂದು ಮತ್ತೊಮ್ಮೆ ಪ್ರಾರ್ಥಿಸುವೆ
#Kodagu #Coorg #Virajpet #Madikeri #Kushalnagar #Ponnampet #Kolakeri

The nomination of Sri Jayram Ramesh and Sri Mansoor Khan, 01/06/2022
The nomination of Sri Jayram Ramesh and Sri Mansoor Khan, official candidates of the Indian National Congress for the forthcoming Rajya Sabha was found to be in order and accepted by the returning officer. Wishing the two gentlemen the best of luck.
ಮುಂಬರುವ ರಾಜ್ಯಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಾದ ಶ್ರೀ ಜಯರಾಮ್ ರಮೇಶ್ ಮತ್ತು ಮನ್ಸೂರ್ ಖಾನ್ ಅವರ ನಾಮಪಾತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾ ಅಧಿಕಾರಿಗಳು ಖಾತ್ರಿ ಮಾಡಿದ್ದಾರೆ. ಈ ಇಬ್ಬರು ಸಜ್ಜನ ರಾಜಕಾರಣಿಗಳಿಗೆ ನನ್ನ ಅಭಿನಂದನೆ ಮತ್ತು ಶುಭಾಶಯಗಳು.
#Karnataka #RajyaSabha #Kodagu #Coorg #Madikeri #Ponnampet #Kushalnagar #Virajpet

Moments with Sri Jayram Ramesh, 01/06/2022
In discussion regarding filing of nomination for Rajya Sabha. A learned and thorough gentleman Sri Jayram Ramesh.
ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದಿ, ಸಭ್ಯ ಸಜ್ಜನ ಹಾಗೂ ರಾಜ್ಯಸಭೆಗೆ ಅತ್ಯಂತ ಸೂಕ್ತ ಅಭ್ಯರ್ಥಿಯಾದ ಶ್ರೀ ಜೈರಾಮ್ ರಮೇಶ್ ರವರೊಂದಿಗೆ ನಾಮಪತ್ರ ಸಲ್ಲಿಕೆ ಕುರಿತು ಮಾತುಕತೆ ನಡೆಸಿದ ಸಂದರ್ಭ.

Meeting with Kodava Baashika Samaj representatives, 31/05/2022
ಕೊಡವ ಭಾಷಿಕ ಸಮಾಜದ ಹಲವಾರು ಪ್ರಮುಖರು, ಮತ್ತು ಆ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ದೀರ್ಘವಾದ ಸಮಾಲೋಚನೆ ನಡೆಸಿದೆ.
ಈ ಸಂಧರ್ಭದಲ್ಲಿ ಹಲವಾರು ವಿಷಯಗಳು, ವಿಚಾರಗಳು ಅವರೊಂದಿಗೆ ಚರ್ಚಿಸಾಲಾಯಿತು. ಬಾಷಿಕ ಸಮಾಜದ ಒಳಿತಿಗೆ ಆಗಬೇಕಾದ ಕಾರ್ಯಗಳ ಬಗ್ಗೆ, ಮುಂದಿನ ದಿನಗಳಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು.
ವಿರಾಜಪೇಟೆಯಲ್ಲಿ ನಡೆದ ಈ ಸಭೆಯಲ್ಲಿ ಭಾಗವಹಿಸಿದ ಬಾಷಿಕ ಸಮಾಜದ ಎಲ್ಲಾ ಹಿರಿಯರಿಗೆ, ಮುಖಂಡರಿಗೆ, ಪ್ರಮುಖರಿಗೆ ವಂದನೆಗಳು. ಅವರು ಕೊಟ್ಟ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನಕ್ಕೆ ನಾನು ಆಭಾರಿಯಾಗಿದ್ದೇನೆ.
#Kodagu #Coorg #Virajpet #Madikeri #Kushalnagar #Ponnampet
