Visited Talakaveri of Bhagamandala on the occasion of Kaveri Theerthodbhava, 12/10/2021
ಇನ್ನು ಕೆಲವೇ ದಿನಗಳಲ್ಲಿ ಜರುಗಲಿರುವ ಕೊಡಗಿನ ಅತ್ಯಂತ ಪವಿತ್ರ ಹಬ್ಬವಾದ ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಭಾಗಮಂಡಲದ ತಲಕಾವೇರಿಗೆ ಭೇಟಿ ನೀಡಿ ಅಲ್ಲಿನ ಸಿದ್ಧತಾ ಕಾರ್ಯಗಳ ಬಗ್ಗೆ ದೇವಾಲಯ ವ್ಯವಸ್ಥಾಪಕ ಅಧಿಕಾರಿಗಳಿಂದ ಮಾಹಿತಿ ಪಡೆದೆ. ಇದೇ ಸಂದರ್ಭದಲ್ಲಿ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದೆ. ಭಕ್ತರಿಗೆ ಅನಗತ್ಯ ಅಡೆತಡೆ ಒಡ್ಡದೆ ಎಲ್ಲರಿಗೂ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳುವ ಅವಕಾಶ ಮಾಡಿಕೊಡಬೇಕೆಂದು ಸೂಚಿಸಿದ್ದೇನೆ.
A program organized by Karnataka Dalit Sangharsha Samiti, Kodagu district to felicitate Covid Warriors, 11/10/2021
ಕೋವಿಡ್ ಸಂದರ್ಭದಲ್ಲಿ ಜನರಿಗೆ ನೆರವಾದ ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೊಡಗು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸುವ ಅವಕಾಶ ಒದಗಿಸಿಕೊಟ್ಟ ಸಮಿತಿಯ ಎಲ್ಲರಿಗೂ ಧನ್ಯವಾದಗಳು. ದ.ಸ.ಸ ದ ಸದಸ್ಯತ್ವ ಅಭಿಯಾನವೂ ಹಮ್ಮಿಕೊಳ್ಳಲಾಗಿತ್ತು. ಎಲ್ಲರಿಗೂ ಅಭಿನಂದನೆಗಳು.
I am extremely happy that I was honored at the annual function of the Ajjikutteera family, 10/10/2021
ಅಜ್ಜಿಕುಟ್ಟೀರ ಕುಟುಂಬದ ವಾರ್ಷಿಕ ಮಹಾಸಭೆಯಂದು ನನ್ನನ್ನು ಸನ್ಮಾನಿಸಿದ್ದು ನನಗೆ ಅತೀವ ಸಂತೋಷವನ್ನು ಉಂಟು ಮಾಡಿದೆ. ನನ್ನದೇ ಕುಟುಂಬ ನನ್ನನ್ನು ಗುರುತಿಸಿರುವುದಕ್ಕಿಂತ ದೊಡ್ಡ ಸನ್ಮಾನ ಮತ್ತೊಂದಿಲ್ಲ. ಕುಟುಂಬದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಕುಟುಂಬದ ಎಲ್ಲಾ ಹಿರಿಯರು ಹಾಗೂ ಸದಸ್ಯರಿಗೆ ನಾನು ಆಭಾರಿಯಾಗಿದ್ದೇನೆ.
Tributes to the Father of the Nation, Mahatma Gandhi on his 152nd birth anniversary, 02/10/2021
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 152ನೇ ಜನ್ಮ ದಿನಾಚರಣೆಯ ಶುಭಾಶಯಗಳು.
"You may never know what results come of your actions, but if you do nothing, there will be no results." Tributes to the Father of the Nation, Mahatma Gandhi on his 152nd birth anniversary. #GandhiJayanti #ಗಾಂಧಿಜಯಂತಿ
Press release on Tok Namme and coconut shooting competition, 29/09/2021
ಮಾಯಮುಡಿಯಲ್ಲಿ ಐರನ್ ಸೈಟ್ ಶೂಟರ್ಸ್ ಆಯೋಜಿಸಿದ್ದ ಕೈಲ್ ಪೋಳ್ದ್ ಹಬ್ಬದ ಅಂಗವಾಗಿ ತೋಕ್ ನಮ್ಮೆ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಬಗ್ಗೆ ಪತ್ರಿಕಾ ವರದಿ. ಕೋವಿ ಹಕ್ಕು ಮತ್ತು ಇದರ ಬಗ್ಗೆ ಉಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಈ ಸಂದರ್ಭದಲ್ಲಿ ವಿವರಿಸಿದ್ದೆ. ಧನ್ಯವಾದಳು Andolana