With locals of Virajapete, Birunani Panchayat, Kotiyala, Badagarakeri village, 18/01/2022

ವಿರಾಜಪೇಟೆಯ, ಬಿರುನಾನಿ ಪಂಚಾಯತ್, ಕೋಟಿಯಾಲ, ಬಾಡಗರಕೇರಿ ಗ್ರಾಮದ ಸ್ಥಳೀಯರು ಕುಡಿಯುವ ನೀರಿನ ಅಭಾವದಿಂದ ಸಂಕಷ್ಟದಲ್ಲಿದ್ದು, ಸಮಸ್ಯೆ ಬಗೆಹರಿಸಲು ನನ್ನಲ್ಲಿ ಕೇಳಿಕೊಂಡಿದ್ದರು. ಡಿಸೆಂಬರ್ 29 ನೇ ತಾರೀಕು ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿ ಬೋರ್'ವೆಲ್ ನಿಂದ ಕುಡಿಯುವ ನೀರು ಒದಗಿಸುವ ಭರವಸೆ ಕೊಟ್ಟಿದ್ದೆ.
ಮೊನ್ನೆ ಜನವರಿ 16ಕ್ಕೆ, ಬೋರ್'ವೆಲ್ ಕೊರೆಯುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆದೃಷ್ಟ ಕೈಕೊಟ್ಟಿದೆ. 350 ಅಡಿ ಕೊರೆದರು ನೀರು ಸಿಕ್ಕಿಲ್ಲ. ಸ್ಥಳೀಯ ಜನರು ಎದೆಗುಂದಬಾರದು. ತಾಯಿ ಕಾವೇರಿ ಎಂದಿಗೂ ತನ್ನ ಮಕ್ಕಳನ್ನು ಕಾಪಾಡುತ್ತಾಳೆ ಎಂಬ ನಂಬಿಕೆ ಇರಲಿ. ????????
 
img
img
img
img
img
 

2021 Chowri Cup Football and Hockey tournaments in Murnadu, 02/01/2022

ಇಂದು ಮೂರ್ನಾಡುವಿನಲ್ಲಿ 2021 ಸಾಲಿನ ಚೌರೀರ ಕಪ್ ಫುಟ್ಬಾಲ್ ಮತ್ತು ಹಾಕಿ ಪಂದ್ಯಾವಳಿಗಳ ಸಮಾರಂಭದಲ್ಲಿ ಪಾಲ್ಗೊಂಡು ಆಯೋಜಕರಿಗೂ, ಕ್ರೀಡಾಪಟುಗಳಿಗೂ ಶುಭ ಕೋರಿದೆ. ಚೌರೀರ ಕುಟುಂಬದವರು ಆಯೋಜಿಸಿರುವ ಕ್ರೀಡಾಕೂಟದಲ್ಲಿ 90 ಹಾಕಿ ತಂಡಗಳು ಹಾಗೂ ಐವತಕ್ಕೂ ಹೆಚ್ಚು ಫೂಟ್'ಬಾಲ್ ತಂಡಗಳು ಪಾಲ್ಗೊಂಡಿರುವುದು ಹೆಮ್ಮೆಯ ವಿಚಾರ. ಕೊಡಗು ಎಂದಿಗೂ ಕ್ರೀಡಾ ಪ್ರೋತ್ಸಾಹಕ್ಕೆ ಹೆಸರುವಾಸಿ. ಕೊಡಗಿನ ಸಂಸ್ಕೃತಿಯಲ್ಲೇ ಕ್ರೀಡೆ ಬೆರೆತುಹೋಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಅನೇಕ ಕೊಡಗಿನ ಕ್ರೀಡಾಪಟುಗಳು ಈ ರೀತಿಯ ಪಂದ್ಯಾವಳಿಗಳಿಂದಲೇ ಬೆಳೆದಿದ್ದು. ಈ ರೀತಿಯ ಕ್ರೀಡಾಕೂಟಗಳ ಆಯೋಜನೆಯಿಂದಲೇ ಹಲವಾರು ಹೊಸ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ. ಕ್ರೀಡಾಪಟುಗಳಿಗೂ, ಆಯೋಜಕರಿಗೂ ಮತ್ತೊಮ್ಮೆ ನನ್ನ ಅಭಿನಂದನೆಗಳು.
 
ಭಾನುವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ನನಗೆ ಚೌರೀರ ಕುಟುಂಬದ ಅಧ್ಯಕ್ಷರಾದ ಚೌರೀರ ಕೆ.ಪೂವಯ್ಯ, ಅಂತಾರಾಷ್ಟ್ರೀಯ ಕ್ರೀಡಾಪಟು ತೀತಮಡ ಅರ್ಜುನ್ ದೇವಯ್ಯ, ಒಲಂಪಿಯನ್ ಅಂಜಪರವಂಡ ಬಿ.ಸುಬ್ಬಯ್ಯ, ಎಂ.ಎಲ್.ಸಿ ಮಂಡೇಪಂಡ ಸುಜಾ ಕುಶಾಲಪ್ಪ ಹಾಗೂ ಕೊಡವ ಮಕ್ಕಳ ಕೂಟದ ಅಧ್ಯಕ್ಷರಾದ ಬೊಳ್ಳಾಜೀರ ಅಯ್ಯಪ್ಪ ಅವರೊಂದಿಗೆ ವೇದಿಕೆ ಕಲ್ಪಿಸಿದ ಆಯೋಜಕರಿಗೆ ಧನ್ಯವಾದಗಳು.
 
 
img
img
img
img
img
img
img
img
img
img
img
img
img
img
img
 

Visited Ejuru Colony of Hathur Zone of Ponnampet Block, 30/12/2021

ಪೊನ್ನಂಪೇಟೆ ಬ್ಲಾಕ್'ನ ಹಾತೂರು ವಲಯ ಕುಂದ ಈಜೂರು ಕಾಲೋನಿಗೆ ಭೇಟಿಕೊಟ್ಟು ಸ್ಥಳೀಯ ಜನರ ಜೊತೆ ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಈ ಭೇಟಿಯ ವೇಳೆ, ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥರಾದ ಧರ್ಮಜ ಉತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮುಖಂಡರಾದ ಯಶ್ವಿನ್, ಕೊಲ್ಲೀರ ಬೋಪಣ್ಣ, ಕಾಡೆಮಾಡ ಕುಸುಮ, ಬಾನಂಡ ಪೃಥ್ವಿ, ಮುಕ್ಕಾಟೀರ ಸಂದೀಪ್, ಕೊಕ್ಕಂದ ರೋಷನ್, ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು, ಪ್ರತಿನಿಧಿಗಳು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು. ಈಜೂರು ಕಾಲೋನಿಯ ಜನರಿಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ಎಲ್ಲಾರೂ ಕಾರ್ಯೋನ್ಮುಖರಾಗಿದ್ದಾರೆ.
 
 
img
img
img
img
img
 

60th anniversary of Virajpete Bar Association, 28/12/2021

ವಿರಾಜಪೇಟೆಯ ಬಾರ್ ಅಸ್ಸೋಸಿಯೇಷನ್'ನ 60 ವರ್ಷಾಚರಣೆಗೆ ವಿಶೇಷ ಆಹ್ವಾನಿತನಾಗಿ ನನ್ನನು ಆಮಂತ್ರಿಸಿದ್ದ ಅಸ್ಸೋಸಿಯೇಷನ್'ಗೆ ನನ್ನ ಧನ್ಯವಾದಗಳು. ಈ ಸಂದರ್ಭದಲ್ಲಿ ಅಸ್ಸೋಸಿಯೇಷನ್'ನ ವಕೀಲ ಸಹೋದರ ಸದಸ್ಯರ ಉಪಯೋಗಕ್ಕಾಗಿ ಇ-ಲೈಬ್ರರಿ ಯನ್ನು ನನ್ನ ಪೂಜ್ಯ ತಂದೆಯವರಾದ ಎ.ಕೆ.ಸುಬ್ಬಯ್ಯ ಅವರ ನೆನಪಿನಲ್ಲಿ ಕೊಡುಗೆ ನೀಡಲಾಯಿತು. ಇದನ್ನು ಕಾರ್ಯಕ್ರಮದಲ್ಲಿ ಹಾಜರಿದ್ದ ಮಾನ್ಯ ನ್ಯಾಯಾಧೀಶರುಗಳು ಉದ್ಘಾಟನೆ ಮಾಡಿದರು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟಿಸ್ ಎ.ಎಸ್.ಬೋಪಣ್ಣ, ಕರ್ನಾಟಕ ಉಚ್ಚ ನ್ಯಾಯಾಲಯದ ಜಸ್ಟಿಸ್ ಬಿ.ವೀರಪ್ಪ, ಜಸ್ಟಿಸ್ ಎಂ.ಜಿ. ಶುಕೂರ್ ಕಮಲ್, ಪ್ರಧಾನ ಜಿಲ್ಲಾ ಸೆಷನ್ಸ್ ಜಡ್ಜ್ ಬಿ.ಎಲ್ ಜಿನರಲ್‌ಕರ್ ಅವರುಗಳ ಸಮ್ಮುಖದಲ್ಲಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ ಹಲವಾರು ಹಿರಿಯರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಅಸ್ಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಐ.ಆರ್ ಪ್ರಮೋದ್ ಹಾಗೂ ಅಸ್ಸೋಸಿಯೇಷನ್ ನ ಅವರ ಸಹಯೋಗಿಗಳಿಗೆ ಅಭಿನಂದನೆಗಳು.
 
 
img
img
img
img
img
img
img
img
 

Discussed with the Kuttandi administration and teachers about the facilities needed for the school, 27/12/2021

ಕುಟ್ಟಂದಿ ಗ್ರಾಮದ ಕೆ.ಬಿ. ಪ್ರೌಢಶಾಲೆಗೆ ಭೇಟಿ ಕೊಟ್ಟು, ಆಡಳಿತ ಮಂಡಳಿ ಹಾಗೂ ಶಿಕ್ಷಕರ ಜೊತೆ ಶಾಲೆಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಚರ್ಚಿಸಿದೆ. ಹಲವಾರು ವರ್ಷಗಳಿಂದ ಗ್ರಾಮದ ಬದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ, ಮೂಲಭೂತ ಸೌಕರ್ಯದ ಕೊರತೆಯಿಂದ ತತ್ತರಿಸುತ್ತಿದೆ.
 
 
img
img
img
img
img
img
img
img