Protest against the assault on ex-Zilla Panchayat member, 17/02/2022
ಚೆಟ್ಟಳ್ಳಿ ಗ್ರಾಮದಲ್ಲಿ ಪಕ್ಷದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ, ಒಬ್ಬ ಮಹಿಳಾ ಮುಖಂಡರ ಮೇಲೆ ನಡೆದಂತ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪೊಲೀಸರು ತೋರಿಸುತ್ತಿರುವ ನಿರ್ಲಕ್ಷ್ಯದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂದರ್ಭ. ಈ ರೀತಿಯ ಹಲ್ಲೆಗಳು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡುವ ಪೆಟ್ಟುಗಳು. ಪಕ್ಷ ತನ್ನ ಕಾರ್ಯಕರ್ತರ, ಬೆಂಬಲಿಗರ ಹಾಗೂ ಮುಖಂಡರ ಪರವಾಗಿ ಸದಾ ನಿಲ್ಲುತ್ತದೆ.
Cricket tournament in Ponnampet, 17/02/2022
ಪೊನ್ನಂಪೇಟೆಯಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಪಂದ್ಯವನ್ನು ಉದ್ಘಾಟಿಸಿ, ಕ್ರೀಡಾಪಟುಗಳನ್ನು ಮತ್ತು ಅಲ್ಲಿ ಸೇರಿದ್ದ ಎಲ್ಲಾ ವೀಕ್ಷಕರನ್ನು ಭೇಟಿಮಾಡಿ ನನ್ನ ಕೆಲವು ಅನಿಸಿಕೆಗಳನ್ನು ಅವರ ಜೊತೆ ಹಂಚಿಕೊಂಡ ಸಂದರ್ಭ.
Visit to Sri Durga Bhagavati Temple in Madikeri , 13/02/2022
ಮಡಿಕೇರಿಯ ಕಾಟಗೇರಿಯಲ್ಲಿರುವ ಶ್ರೀ ದುರ್ಗಾಭಗವತಿ ದೇವಸ್ಥಾನಕ್ಕೆ ನನ್ನ ಧರ್ಮಪತ್ನಿ ಜೊತೆ ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದೆವು.
ದೇವಸ್ಥಾನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನಮ್ಮನ್ನು ಬರಮಾಡಿಕೊಂಡು ನಮಗೆ ಶ್ರೀಕ್ಷೇತ್ರದ ಮಹತ್ವದ ಬಗ್ಗೆ ವಿವರಿಸಿದರು.
Honoured by Kodava Samaja Bengaluru, 12/02/2022
ಬಂದೂಕು ಪರವಾನಗಿ ವಿನಾಯಿತಿ ಪ್ರಕರಣದಲ್ಲಿ, ಉಚ್ಚ ನ್ಯಾಯಾಲಯದ ಮುಂದೆ ನಾನು ಮಂಡಿಸಿದ ವಾದ ಹಾಗೂ ಪ್ರಕರಣದಲ್ಲಿ ನಾನು ವಹಿಸಿದ ಪಾತ್ರವನ್ನು ಗುರುತಿಸಿ, ಕೊಡವ ಸಮಾಜ ಬೆಂಗಳೂರು ಅವರು, ಕೊಡವರ ಹೆಮ್ಮೆಯ ಪ್ರತೀಕವಾದ ಒಡಿ ಕತ್ತಿಯನ್ನು ನನಗೆ ಕಾಣಿಕೆಯ ರೂಪದಲ್ಲಿ ನೀಡಿ ಸನ್ಮಾನಿಸಿದ್ದಾರೆ. ನನ್ನ ಎಲ್ಲಾ ಪೂರ್ವಜರಿಗೆ, ಹಿರಿಯರಿಗೆ, ಕೊಡವ ಸಮಾಜ ಬೆಂಗಳೂರಿನ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ, ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿಯ ಸದಸ್ಯರಿಗೆ, ಮತ್ತು ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದೇ ಸಂದರ್ಭದಲ್ಲಿ, ಈ ಪ್ರಕರಣದಲ್ಲಿ ವಕಾಲತ್ತು ನಡೆಸಿದ ಎಲ್ಲಾ ವಕೀಲರನ್ನು ಸಮಾಜ ಗೌರವಿಸಿದೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು. ತಾಯಿ ಕಾವೇರಿಯ ಆಶೀರ್ವಾದ ಮತ್ತು ರಕ್ಷಣೆ ಎಲ್ಲರ ಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ.
God Koragajja gave me the fortune to cooperate with the construction of the barrier of Sri Koragajja Temple in Sampaje, 11/02/2022
ಸಂಪಾಜೆಯಲ್ಲಿ ಶ್ರೀ ಕೊರಗಜ್ಜ ದೇವಾಲಯದ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡುವ ಭಾಗ್ಯ ಕೊರಗಜ್ಜ ದೇವರು ನನಗೆ ಕಲ್ಪಿಸಿದರು. ಇತ್ತೀಚೆಗೆ ತಡೆಗೋಡೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.