Honoured by Kodava Samaja Bengaluru, 12/02/2022

ಬಂದೂಕು ಪರವಾನಗಿ ವಿನಾಯಿತಿ ಪ್ರಕರಣದಲ್ಲಿ, ಉಚ್ಚ ನ್ಯಾಯಾಲಯದ ಮುಂದೆ ನಾನು ಮಂಡಿಸಿದ ವಾದ ಹಾಗೂ ಪ್ರಕರಣದಲ್ಲಿ ನಾನು ವಹಿಸಿದ ಪಾತ್ರವನ್ನು ಗುರುತಿಸಿ, ಕೊಡವ ಸಮಾಜ ಬೆಂಗಳೂರು ಅವರು, ಕೊಡವರ ಹೆಮ್ಮೆಯ ಪ್ರತೀಕವಾದ ಒಡಿ ಕತ್ತಿಯನ್ನು ನನಗೆ ಕಾಣಿಕೆಯ ರೂಪದಲ್ಲಿ ನೀಡಿ ಸನ್ಮಾನಿಸಿದ್ದಾರೆ. ನನ್ನ ಎಲ್ಲಾ ಪೂರ್ವಜರಿಗೆ, ಹಿರಿಯರಿಗೆ, ಕೊಡವ ಸಮಾಜ ಬೆಂಗಳೂರಿನ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ, ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿಯ ಸದಸ್ಯರಿಗೆ, ಮತ್ತು ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದೇ ಸಂದರ್ಭದಲ್ಲಿ, ಈ ಪ್ರಕರಣದಲ್ಲಿ ವಕಾಲತ್ತು ನಡೆಸಿದ ಎಲ್ಲಾ ವಕೀಲರನ್ನು ಸಮಾಜ ಗೌರವಿಸಿದೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು. ತಾಯಿ ಕಾವೇರಿಯ ಆಶೀರ್ವಾದ ಮತ್ತು ರಕ್ಷಣೆ ಎಲ್ಲರ ಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ.
 
 
img
 

God Koragajja gave me the fortune to cooperate with the construction of the barrier of Sri Koragajja Temple in Sampaje, 11/02/2022

ಸಂಪಾಜೆಯಲ್ಲಿ ಶ್ರೀ ಕೊರಗಜ್ಜ ದೇವಾಲಯದ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡುವ ಭಾಗ್ಯ ಕೊರಗಜ್ಜ ದೇವರು ನನಗೆ ಕಲ್ಪಿಸಿದರು. ಇತ್ತೀಚೆಗೆ ತಡೆಗೋಡೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
 
 
img
img
img
img
img
img
 

Glad to participate in the concluding ceremony of the Cricket tournament conducted by the Kaikeri Youth Club, 10/02/2022

I am glad to have participated in the concluding ceremony of the Cricket tournament conducted by the Kaikeri Youth Club. Only sports have the ability to unite people across all sections. It was a wonderfully organised and a very successful event. It is time to celebrate every form of diversity in our society.
 
ಕೈಕೇರಿ ಯೂತ್ ಕ್ಲಬ್ ಅವರು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಪಂದ್ಯ ವೀಕ್ಷಣೆಯಲ್ಲಿ ಪಾಲ್ಗೊಂಡು, ವಿಜೇತ ತಂಡ ಹಾಗೂ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಣೆ ಮಾಡಿದ ಸಂದರ್ಭ. ಎಲ್ಲಾ ಜನಾಂಗದ ಜನರನ್ನು ಒಟ್ಟುಗೂಡಿಸುವ ಶಕ್ತಿ ಇರುವುದು ಕ್ರೀಡೆಗೆ ಮಾತ್ರ. ನಮ್ಮಲ್ಲಿರುವ ವೈವಿಧ್ಯತೆಯನ್ನು ನಾವು ಮರೆಯಬಾರದು. ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ಆಯೋಜಿಸಿದ್ದ ಕ್ಲಬ್'ಗು, ಕ್ರೀಡಾ ಮನೋಭಾವದಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದನೆಗಳು.
 
img
img
img
img
img
img
 

We are always ready to respond to the problems of our party workers and common people, 09/02/2022

ಕೊಡಗಿನಲ್ಲಿ ಜನಪ್ರತಿನಿಧಿಗಳಿಗೆ ಆಮಿಷವೊಡ್ಡಿ ಬಿಜೆಪಿಗೆ ಸೆಳೆದುಕೊಳ್ಳುವ ಕೆಲಸ ಆ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಕಳೆದ ಫೆಬ್ರವರಿ 4ನೇ ತಾರೀಕು ಚೆಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಶಿಕಲಾ ಕಟ್ಟೆಪಾರೆ ರವರು ಆ ಅಮೀಷಗಳನ್ನು ತಿರಸ್ಕರಿಸಿ ಮಾತೃಪಕ್ಷ ಕಾಂಗ್ರೆಸ್'ಗೆ ಮರಳಿದ್ದಾರೆ.ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಯಾವುದೇ ರೀತಿಯ ಒತ್ತಡಕ್ಕೆ ಮಣಿಯುವ ಅವಶ್ಯಕತೆ ಇಲ್ಲ. ಈ ಘಟನೆ ಬಿಜೆಪಿಯವರ ಕುತಂತ್ರವನ್ನು ಮತ್ತೊಮ್ಮೆ ಜಗಜ್ಜಾಹೀರಾಗಿಸಿದೆ. ನಮ್ಮ ಪಕ್ಷದ ಕಾರ್ಯಕರ್ತರ ಹಾಗೂ ಜನಸಾಮಾನ್ಯರ ತೊಂದರೆಗಳಿಗೆ ಸ್ಪಂದಿಸಲು ನಾವುಗಳು ಸದಾ ಸಿದ್ಧರಿರುತ್ತೇವೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಇಸ್ಮಾಯಿಲ್, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ಗೌಡ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಸೂರಜ್ ಹೊಸೂರು, ಚಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕುಸುಮಾ ಯೋಗೀಶ್ವರ್, ನಾಪೋಕ್ಲು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷರಾದ ಶ್ರೀಧರನ್ ನಾಯರ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹನೀಫ್ ಸಂಪಾಜೆ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮುತ್ತು ರಶೀದ್, ಸಾಮಾಜಿಕ ಜಾಲತಾಣ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಶೇಖರ್, ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್ ದೋಳ್ಪಾಡಿ, ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಹೊಸೂರು, ಚೆಂಬು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾರತಿ, ಯುವ ಕಾಂಗ್ರೆಸ್ ವಲಯಾಧ್ಯಕ್ಷ ಭರತ್ ಕೆದಂಬಾಡಿ, ಯುವ ಮುಖಂಡರಾದ ಮನು ಏಣಿಯರ, ಮಧು ಹೊಸೂರು, ಲೋಕೇಶ್ ಹೊದ್ದೆಟ್ಟಿ, ಚನಿಯಪ್ಪ ಕುದುರೆ ಪಾಯ, ಕೆಸಿ ಸುರೇಶ್ ಹಾಗೂ ಇತರರ  ಸಮ್ಮುಖದಲ್ಲಿ ಶ್ರೀಮತಿ ಶಶಿಕಲಾ ಕಟ್ಟೆಪಾರೆ ಅವರು ಮರಳಿ ಕಾಂಗ್ರೆಸ್ ಸೇರ್ಪಡೆಯಾದರು.

 
 

Condolence meet for senior leader K.C Raja, 08/02/2022

Condolence meet for senior leader K.C Raja ಕೆಲವು ದಿನಗಳ ಹಿಂದೆ ನಮ್ಮನ್ನು ಅಗಲಿದ, ಕೆ.ಸಿ ರಾಜ ಎಂದು ಎಲ್ಲರಿಗೂ ಚಿರಪರಿಚಿತರಾದಂತಹ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಂತಾಪ ಸಭೆಯಲ್ಲಿ ಭಾಗವಹಿಸಿ, ಪಕ್ಷಕ್ಕೆ ಅವರ ಅಮೂಲ್ಯ ಕೊಡುಗೆಯನ್ನು ಮತ್ತು ಅವರ ಅಕಾಲಿಗ ಅಗಲಿಕೆಯಿಂದ ಪಕ್ಷಕ್ಕೆ ಆಗಿರುವ ನಷ್ಟವನ್ನು ಸ್ಮರಿಸಿದೆ. ಅವರ ಕುಟುಂಬಕ್ಕೆ, ಅವರ ಸ್ನೇಹಿತರಿಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಬೆಂಬಲಿಗರಿಗೆ ಅವರ ಅಕಾಲಿಕ ಅಗಲಿಕೆಯಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ತಾಯಿ ಕಾವೇರಿ ಹಾಗೂ ಇಗ್ಗುತಪ್ಪ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದೆ.
 
 
img
img
img
img