My condolences to the family and friends of Naveen, the Karnataka student who was killed in Ukraine, 02/03/2022

My condolences to the family and friends of Naveen, the Karnataka student who was killed in Ukraine. My heart goes out to the young medical student who life has been cut short by war. We have to redouble our efforts to bring back all Indians safely back to India.
 
ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್, ಉಕ್ರೇನ್ ನಲ್ಲಿ ಸಾವನ್ನಪ್ಪಿರುವುದು ಆಘಾತದ ಸುದ್ದಿ. ಉಕ್ರೇನ್ ನಲ್ಲಿ ಇನ್ನು ಸಿಲುಕಿರುವ ಭಾರತೀಯರನ್ನು ಕ್ಷೇಮವಾಗಿ ಕರೆತರುವ ಬಗ್ಗೆ ಸರ್ಕಾರದಿಂದ ಇನ್ನಷ್ಟು ತೀವ್ರಗತಿಯ ಕಾರ್ಯಗಳು ಆಗಬೇಕಿದೆ. ನವೀನ್ ಕುಟುಂಬದ ದುಃಖದಲ್ಲಿ ಭಾರತೀಯರೆಲ್ಲರು ಭಾಗಿಯಾಗಿದ್ದೇವೆ.
 
 
img
 

Membership drive at Virajpet block, 01/03/2022

ಕೊಡಗಿನ ವಿರಾಜಪೇಟೆಯಲ್ಲಿ ನಮ್ಮ ಪಕ್ಷದ ತತ್ವ ಸಿದ್ದಾಂತಗಳನ್ನು ಅನುಸರಿಸುವ ಮತ್ತು ಪಕ್ಷಕ್ಕೆ ದುಡಿಯುವ ಹುಮ್ಮಸ್ಸು ಇರುವವರನ್ನು ಪಕ್ಷಕ್ಕೆ ಸೇರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನದ ಅವಶ್ಯಕತೆ ಬಗ್ಗೆ ಮಾತನಾಡಿದೆ. ಪಕ್ಷದ ಸಿದ್ಧಾಂತಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸುವ ಬಗ್ಗೆ ಮತ್ತು ಪಕ್ಷದಲ್ಲಿ ಇರುವವರ ಹೊಣೆಗಾರಿಕೆಗಳ ಬಗ್ಗೆ ಮಾತನಾಡಿದೆ. ಪಕ್ಷದ ಬಗ್ಗೆ ನಿಷ್ಠೆ, ಸೈದ್ಧಾಂತಿಕ ಬದ್ಧತೆಯ ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟದ ಅವಶ್ಯಕತೆ ಬಗ್ಗೆ ವಿವರಿಸಿದೆ.
 
 
img
img
img
img
 

Membership drive at Ponnampet and Napoklu, 28/02/2022

ಕೊಡಗಿನ ಪೊನ್ನಂಪೇಟೆ ಮತ್ತು ನಾಪೋಕ್ಲುಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿ ಪಕ್ಷದ ಸಿದ್ಧಾಂತಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸುವ ಬಗ್ಗೆ ಮತ್ತು ಪಕ್ಷದಲ್ಲಿ ಇರುವವರ ಹೊಣೆಗಾರಿಕೆಗಳ ಬಗ್ಗೆ ಮಾತನಾಡಿದೆ. ಪಕ್ಷದ ಬಗ್ಗೆ ನಿಷ್ಠೆ, ಸೈದ್ಧಾಂತಿಕ ಬದ್ಧತೆಯ ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟದ ಅವಶ್ಯಕತೆ ಬಗ್ಗೆ ವಿವರಿಸಿದೆ.
 
 
img
img
img
img
img
img
 

Final darshan of Altaf Ahmed, a soldier of Virajapete of Kodagu who recently died in Kashmir, 27/02/2022

ಇತ್ತೀಚಿಗೆ ಕಾಶ್ಮೀರದಲ್ಲಿ ವೀರಮರಣವನ್ನು ಹೊಂದಿದ ಕೊಡಗಿನ ವಿರಾಜಪೇಟೆಯ ಯೋಧ ಅಲ್ತಾಫ್ ಅಹಮದ್ ರವರ ಅಂತಿಮ ದರ್ಶನವನ್ನು ಶನಿವಾರ ಪಡೆದು, ವೀರಯೋಧನ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದೆ. ಅವರ ಮನೆಯವರಿಗೆ ಸಾಂತ್ವನ ಹೇಳಿ ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅವರ ಆತ್ಮಕ್ಕೆ ಶಾಂತಿ ಕೋರಿದೆ. ಶನಿವಾರ ಬೆಳಿಗ್ಗೆ ಬೆಂಗಳೂರಿನಿಂದ ವಿರಾಜಪೇಟೆಗೆ ರಸ್ತೆಯ ಮೂಲಕ ಆಗಮಿಸಿದ ಯೋಧನ ಪ್ರಾರ್ಥಿವ ಶರೀರದ ಅಂತಿಮ ದರ್ಶನವನ್ನು ಸಾವಿರಾರು ಜನರು ಪಡೆದಿದ್ದು ಕೊಡಗಿನ ವೀರಪರಂಪರೆಗೆ ಸಾಕ್ಷಿಯಾಗಿತ್ತು. ????????
 
 
img
img
img
img
img
img
 

Massive protest against the humiliation done to Baba Saheb Ambedkar, 23/02/2022

ಬಾಬಾ ಸಾಹೇಬ್ ಅಂಬೇಡ್ಕರ್'ಗೆ ಮಾಡಿದ ಅಪಮಾನದ ವಿರುದ್ಧ ಈ ಬೃಹತ್ ಪ್ರತಿಭಟನೆ ಮಾಧ್ಯಮದ ಕಣ್ಣಿಗೆ ಬೀಳಲಿಲ್ಲವೇ? ಬಾಬಾ ಸಾಹೇಬರ ಕಡೆಗಣನೆ ಯಾರೂ ಕೂಡ ಸಹಿಸಬಾರದು.
 
 
img
img
img
img
img
img