Happy labour day, 01/05/2022

ಕಾಯಕವೇ ಕೈಲಾಸ ಎಂಬ ವಚನ ಪಾಲಿಸುವ ನಮ್ಮ ನಾಡಿನ ಸಮಸ್ತ ಶ್ರಮಿಕ ವರ್ಗಕ್ಕೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು. ನೀವು ದೇಶದ ಆರ್ಥಿಕತೆಯ ಬೆನ್ನೆಲುಬು. ನಿಮ್ಮ ಬೆವರಿನ ಋಣ ನಮ್ಮೆಲ್ಲರ ಮೇಲಿದೆ. #Labour #LabourDay2022
 
 
img
 

Naalnaad Cup Hockey Tournament, 28/04/2022

ಕೊಡಗಿನ ನಾಪೋಕ್ಲುವಿನ ನಾಲ್ನಾಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ನಾಲ್ನಾಡ್ ಕೊಡವ ಕಪ್ ಹಾಕಿ ಪಂದ್ಯಾವಳಿಯ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಒದಗಿಬಂತು. ಚೇರಿಯಪರಂಬು ಜೆನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬಹಳ ಸುಸಜ್ಜಿತವಾಗಿ ಹಾಗೂ ಅಚ್ಚುಕಟ್ಟಾಗಿ ಪಂದ್ಯಾವಳಿಗಳನ್ನು ಆಯೋಜಿಸಿದ ಆಯೋಜಕರಿಗೆ ಅಭಿನಂದನೆಗಳು.

ಕ್ರೀಡಾ ಮನೋಭಾವದಿಂದ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದನೆಗಳು. ಕೊಡಗಿನ ಕ್ರೀಡಾ ಪರಂಪರೆಗೆ ಈ ರೀತಿಯ ಪಂದ್ಯಾವಳಿಗಳ ಕೊಡುಗೆ ಅಪಾರ. ಕೊಡಗಿನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಅನೇಕ ಕ್ರೀಡಾಪಟುಗಳು ಇಲ್ಲಿಂದಲೇ ಬೆಳೆದವರು. ಕಾರ್ಯಕ್ರಮಕ್ಕೆ ನನ್ನನ್ನು ಪ್ರೀತಿಯಿಂದ ಆಹ್ವಾನಿಸಿದ ಆಯೋಜಕರಿಗೆ ಧನ್ಯವಾದಗಳು. ಗೆದ್ದ ತಂಡಗಳಿಗೂ, ಭಾಗವಹಿಸಿದ ಕ್ರೀಡಾಪಟುಗಳಿಗೂ ಮತ್ತೊಮ್ಮೆ ಅಭಿನಂದನೆ ಮತ್ತು ಶುಭ ಹಾರೈಕೆಗಳು.

#Kodagu #Coorg #Madikeri #Virajpet #Ponnampet #Kushalnagar #Naalnaad #Hockey #Sports

 
 

Party meeting in Siddapur, 26/04/2022

ಸಿದ್ದಾಪುರ ವಲಯದ ಪಕ್ಷದ ಸಭೆಯಲ್ಲಿ ಪಾಲ್ಗೊಂಡು, ಪಕ್ಷ ಸಂಘಟನೆ, ಸ್ಥಳೀಯ ಸಮಸ್ಯೆಗಳು, ಪರಿಹಾರ ಕ್ರಮಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸ್ಥಳೀಯ ಮುಖಂಡರಿಂದ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಪಕ್ಷದ ಸಂಘಟನೆಗೆ ಸಂಪರ್ಕ ಕಾರ್ಯಕ್ರಮಗಳು, ಹೊಸ ಸದಸ್ಯರ ನೊಂದಣಿ ಬಗ್ಗೆ ಕೂಡ ಚರ್ಚಿಸಾಲಾಯಿತು.

#Coorg #Kodagu #Madikeri #Virajpet #Ponnampet #Siddapura

 
 

Helping hand to specially-abled woman, 26/04/2022

ಗೋಣಿಕೊಪ್ಪಲು ಸಮೀಪ‌ದ ಬಿ.ಶೆಟ್ಟಿಗೇರಿಯಲ್ಲಿ ವಾಸವಿರುವ ಓರ್ವ ವಿಶೇಷ ಚೇತನ ಮಹಿಳೆಯ ಸಂಕಷ್ಟದ ಬಗ್ಗೆ ನನ್ನ ಗಮನಕ್ಕೆ ತರಲಾಗಿತ್ತು. ಅವರ ಮನೆಗೆ ಭೇಟಿ ನೀಡಿ ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಯಿತು. ಇದೇ ಸಂಧರ್ಭದಲ್ಲಿ ಅವರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು‌ ನೀಡಿಲಾಯಿತು.

#Kodagu #Coorg #Gonikoppa #Madikeri #Ponnampet #Kushalnagar #Virajpet #BShettigeri

 
 

Visit to homes of accident victims of Pollibetta, 24/04/2022

ಕಲ್ಲಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಪಾಲಿಬೆಟ್ಟದ ಏಳು ಜನ ನಿವಾಸಿಗಳ ಮನೆಗಳಿಗೆ ಶನಿವಾರ ಭೇಟಿ ಕೊಟ್ಟು ಅವರ ಕುಟುಂಬಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಲಾಯಿತು.  

ದುರಂತದಲ್ಲಿ ಸಾವನ್ನಪ್ಪಿದವರ ಬಡ ಕುಟುಂಬಗಳಿಗೆ ಸರಕಾರ ವಿಶೇಷ ಪ್ರಕರಣದಡಿ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದೇನೆ.

ಈ ಭೇಟಿಯ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಡಿಸಿಸಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಎ.ಎಸ್.ನರೇನ್ ಕಾರ್ಯಪ್ಪ, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಎ. ಎಸ್. ಟಾಟು ಮೊಣ್ಣಪ್ಪ, ಡಿಸಿಸಿ ಸದಸ್ಯರಾದ ಮುಕ್ಕಾಟಿರ ಸಂದೀಪ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಎನ್. ಪ್ರತ್ಯು, ಕೆ.ಎಂ. ಬಾಲಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಚ್. ವಿ. ರಾಮದಾಸ್, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಮಾಳೇಟಿರ ಸಾಬ ಕಾಳಪ್ಪ, ವಿಜೇಶ್, ಪಕ್ಷದ ಮಾಲ್ದಾರೆ ವಲಯ ಸಮಿತಿ ಅಧ್ಯಕ್ಷರಾದ ಸಜಿ ಥೋಮಸ್ ಮೊದಲಾದವರು ಉಪಸ್ಥಿತರಿದ್ದರು.

#Kodagu #Coorg #Pollibetta #Madikeri #Ponnampet #Virajpet #Kushalnagar