Gonikoppa Premier League cricket tournament by Youth Wing, 29/01/2022
Gonikoppa Premier League cricket tournament by Youth Wing
7 Star ಯೂತ್ ವಿಂಗ್, ಗೋಣಿಕೊಪ್ಪ ಅವರು ಆಯೋಜಿಸಿದ್ದ 6ನೇ ವರ್ಷದ ಗೋಣಿಕೊಪ್ಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರಂಭದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳು ಹಾಗೂ ಆಯೋಜಕರಿಗೆ ಶುಭಕೋರಿದ ಸಂಧರ್ಭ. ಕೊಡಗು ಜಿಲ್ಲೆಯಿಂದ ಸಾಕಷ್ಟು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ. ಸ್ಥಳೀಯವಾಗಿ ಆಯೋಜಿಸುವ ಈ ರೀತಿಯ ಪಂದ್ಯಾವಳಿಗಳಿಂದ ಇನ್ನಷ್ಟು ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ. ಪಂದ್ಯಾವಳಿ ಆಯೋಜಕರು, ಜಿ.ಪಿ.ಎಲ್ ಕುಟುಂಬ ಮತ್ತು ಪ್ಲಾಗೊಂಡ ಎಲ್ಲಾ ಕ್ರೀಡಾಪ್ರೇಮಿಗಳಿಗೂ ಅಭಿನಂದನೆಗಳು.


Meeting of party workers at Koyanadu, 29/01/2022
ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್ ಮೊಹಿದಿನ್ ಕುಂಞ ರವರ ಕೊಯನಾಡು ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಸಂದರ್ಭ. ಸಭೆಯಲ್ಲಿ ಮಾಜಿ ಕೊಡಗು ಡಿಸಿಸಿ ಸದಸ್ಯರಾದ ಎನ್.ಸಿ ಮನೋಹರ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮನಾಥ, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಪಿ.ಎಲ್ ಸುರೇಶ್, ಮುಖಡರಾದ ಗಣಪಯ್ಯ, ಕನ್ಯಾನ ವಿಜಯಕುಮಾರ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ ಹನೀಫ್, ನಾಯಕರಾದ ವಾಸು ಪೂಜಾರಿ, ಬ್ಲಾಕ್ ಕಾಂಗ್ರೆಸ್ ನಾಯಕಿ ಕೆ.ಕೆ ರಾಜೇಶ್ವರಿ, ಪಂಚಾಯತ್ ಸದಸ್ಯ ಗಿರೀಶ್, ಚೆಂಬು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಚೆಂಬು ಸಂಪಾಜೆಯ ಎಲ್ಲಾ ಕಾರ್ಯಕರ್ತರು ಭಾಗವಹಿಸಿದರು.





Addressing Pragati Auto Drivers and Owners Association, APMC, Gonikoppa, 28/01/2022
Best wishes to Pragati Auto Drivers and Owners Association, APMC, Gonikoppa. ಗೋಣಿಕೊಪ್ಪಲು ಎಪಿಎಂಸಿ ಆವರಣದಲ್ಲಿ ನೂತನವಾಗಿ ಸ್ಥಾಪನೆಯಾದ ಪ್ರಗತಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಉದ್ಘಾಟನೆಯನ್ನು ಹಲವು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ನೆರವೇರಿಸಿದ ಸಂದರ್ಭ. ಸಂಘದ ಅಧ್ಯಕ್ಷರಾದ ಎಂ.ಎನ್.ಪ್ರಕಾಶ್, ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ನನ್ನ ಅಭಿನಂದನೆಗಳು.




Visit to Sampaje, 27/01/2022
During my visit to Sampaje, I prayed at the Panchalingeshwara Temple and Chedavu Koragajja Daivasthana.
ಸಂಪಾಜೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಚೆಡಾವು ಕೊರಗಜ್ಜ ದೈವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದೆ. ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಜೊತೆಗಿದ್ದರು.






With locals of Virajapete, Birunani Panchayat, Kotiyala, Badagarakeri village, 18/01/2022
ವಿರಾಜಪೇಟೆಯ, ಬಿರುನಾನಿ ಪಂಚಾಯತ್, ಕೋಟಿಯಾಲ, ಬಾಡಗರಕೇರಿ ಗ್ರಾಮದ ಸ್ಥಳೀಯರು ಕುಡಿಯುವ ನೀರಿನ ಅಭಾವದಿಂದ ಸಂಕಷ್ಟದಲ್ಲಿದ್ದು, ಸಮಸ್ಯೆ ಬಗೆಹರಿಸಲು ನನ್ನಲ್ಲಿ ಕೇಳಿಕೊಂಡಿದ್ದರು. ಡಿಸೆಂಬರ್ 29 ನೇ ತಾರೀಕು ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿ ಬೋರ್'ವೆಲ್ ನಿಂದ ಕುಡಿಯುವ ನೀರು ಒದಗಿಸುವ ಭರವಸೆ ಕೊಟ್ಟಿದ್ದೆ.
ಮೊನ್ನೆ ಜನವರಿ 16ಕ್ಕೆ, ಬೋರ್'ವೆಲ್ ಕೊರೆಯುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆದೃಷ್ಟ ಕೈಕೊಟ್ಟಿದೆ. 350 ಅಡಿ ಕೊರೆದರು ನೀರು ಸಿಕ್ಕಿಲ್ಲ. ಸ್ಥಳೀಯ ಜನರು ಎದೆಗುಂದಬಾರದು. ತಾಯಿ ಕಾವೇರಿ ಎಂದಿಗೂ ತನ್ನ ಮಕ್ಕಳನ್ನು ಕಾಪಾಡುತ್ತಾಳೆ ಎಂಬ ನಂಬಿಕೆ ಇರಲಿ. 





