Celebrating 75 Years of Indian Independence, 16/08/2022
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆಂದೇ ಸ್ಥಾಪನೆಯಾದ ಪಕ್ಷ ನಮ್ಮದು. ಲಕ್ಷಾಂತರ ಜನರನ್ನು ಒಗ್ಗೂಡಿಸಿ, ಅವರಲ್ಲಿ ದೇಶಪ್ರೇಮವನ್ನು ಬಿತ್ತಿ, ಹೋರಾಟದಿಂದ ಪಡೆದ ಸ್ವಾತಂತ್ರ್ಯ ನಮ್ಮದು. ಕಳೆದ 75 ವರ್ಷಗಳಿಂದ ಈ ಸ್ವಾತಂತ್ರ್ಯವನ್ನು ಪ್ರತಿಯೊಬ್ಬ ಪ್ರಜೆಯ ಏಳಿಗೆಗೆ ಸದ್ಬಳಕೆ ಮಾಡುವ ಕೆಲಸ ನಿರಂತರವಾಗಿ ನಡೆದಿದೆ.
ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮವನ್ನು ಪಕ್ಷವು ಅದ್ದೂರಿಯಾಗಿ ಸಂಭ್ರಮಿಸಿ, ದೇಶಕ್ಕೆ ಮಾದರಿಯಾಯಿತು. ಸಂಗೊಳ್ಳಿ ರಾಯಣ್ಣ ವೃತ್ತ-ಫ್ರೀಡಂ ಪಾರ್ಕ್ ಇಂದ ಆರಂಭವಾಗಿ ಸ್ವಾತಂತ್ರ್ಯ ನಡಿಗೆ ನ್ಯಾಷನಲ್ ಕಾಲೇಜ್ ಮೈದಾನದವರೆಗೂ ಚಾಚಿತ್ತು. ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡು, ಸ್ವಾತಂತ್ರ್ಯ ನದಿಗೆಯನ್ನು ಯಶಸ್ವಿ ಮಾಡಿದರು.
ಕೊಡಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಬೆಂಬಲಿಗರು, ಮುಖಂಡರು, ಹಿತೈಷಿಗಳು ನಡಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ನಡಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಶುಭಾಶಯಗಳು.
ಸ್ವಾತಂತ್ರ್ಯ ಒಂದೇ ದಿನದ ಸಂಭ್ರಮವಲ್ಲ. ಪ್ರತಿದಿನವೂ ನಮ್ಮ ಹಿಂದಿನವರ ತ್ಯಾಗ ಬಲಿದಾನ ನೆನೆಯುತ್ತ, ಸ್ವಾತಂತ್ರ್ಯವನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ.
#IndependenceDay2022 #JaiHind #Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery

Let's pledge to protect our freedom on #IndependenceDay2022, 15/08/2022
On the 75th anniversary of our #TrystWithDestiny let's pledge to protect our freedom on #IndependenceDay2022
ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನಮ್ಮೆಲ್ಲರ ಸಾಂವಿಧಾನಿಕ ಸ್ವಾತಂತ್ರ್ಯವನ್ನು ರಕ್ಷಿಸುವ, ದೇಶದ ಸಂವಿಧಾನವನ್ನು ಕಾಪಾಡುವ, ಜನರ ನಿಜವಾದ ಹಕ್ಕುಗಳನ್ನು ಪ್ರತಿಪಾದಿಸುವ ಸಂಕಲ್ಪವನ್ನು ಮಾಡೋಣ. #JaiHind

Visit to Talacauvery, 14/08/2022
ಭಾಗಮಂಡಲದಲ್ಲಿ ತಲಕಾವೇರಿ ಕ್ಷೇತ್ರಕ್ಕೆ ಭೇಟಿಕೊಟ್ಟು, ತಾಯಿ ಕಾವೇರಿಯ ಆಶೀರ್ವಾದ ಪಡೆದ ಕ್ಷಣಗಳು.
ಕೊಡಗಿನ ಜೀವಸಂಕುಲದ ದೇವತೆ, ಕೊಡಗಿನ ಜನರ ಕುಲದೇವತೆ ಕಾವೇರಿ ತಾಯಿಯು ಸಾವಿರಾರು ವರ್ಷಗಳಿಂದ ನಮ್ಮನ್ನು ಸಲುಹಿದ್ದಾಳೆ. ತಾಯಿಯ ಸನ್ನಿಧಿಗೆ ಭೇಟಿಕೊಡುವುದೇ ಪುಣ್ಯದ ಕೆಲಸ.
ಈ ವರ್ಷವೂ, ಜನರ ಪಾಲಿಗೆ ವರವಾಗಿ, ರೈತರ ಪಾಲಿಗೆ ಜೀವನದಿಯಾಗಿ ಸಕಲ ಜನಕ್ಕೂ ಒಳ್ಳೆಯದಾಗಲಿ ಎಂದು ಬೇಡಿಕೊಂಡೇ. ನಾಡಿನ ಸಮಸ್ತ ಜನರ ರಕ್ಷಣೆಗೆ ದೇವರಲ್ಲಿ ಪ್ರಾರ್ಥಿಸಿದೆ. ಜೊತೆಗೆ ಭಗಂಡೇಶ್ವರ ದೇವಸ್ಥಾನಕ್ಕೆ ಭೇಟಿಕೊಟ್ಟು, ಪೂಜೆ ಸಲ್ಲಿಸಿದೆ.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery

Program on BTV, 13/08/2022
#law #lawyer #karnatakalawyer #kodava #kodagu #virajpet
He raised me to be a strong man, 09/08/2022
ನನ್ನ ತಂದೆಯವರಾದ ಎ ಕೆ ಸುಬ್ಬಯ್ಯ ಅವರು ಈ ರಾಜ್ಯ ಕಂಡ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿ. ಒಬ್ಬ ತಂದೆಯಾಗಿ ಅವರು ನನ್ನನ್ನು ಸ್ವಂತವಾಗಿ ಆಲೋಚನೆ ಮಾಡಲು ಮತ್ತು ಸ್ವ-ಇಚ್ಛೆಯಿಂದ ಹೆಜ್ಜೆ ಇಡುವಂತೆ ಬೆಳೆಸಿದ್ದಾರೆ. ಸ್ವಾಭಾವಿಕವಾಗಿ ಅವರ ಈ ಗುಣಗಳು ನನ್ನಲೂ ಇದೆ.
ಶಿಕ್ಷಣದ ಮಹತ್ವ, ಜನರೊಂದಿಗೆ ಬೆರೆಯುವ ತವಕ, ಸಮಾಜಮುಖಿಯಾಗಿ ಆಲೋಚನೆ ಮಾಡುವ ಹಂಬಲ, ಜನರ ಬಗ್ಗೆ ಇಡಬೇಕಾದ ಕಾಳಜಿ, ಎಲ್ಲವನ್ನು ನಾನು ಅವರಿಂದ ಕಲಿತೆ.
ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ಣ ಪ್ರೀತಿಯ ನಮನಗಳು.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #AKSubbaiah

