Madanda Thimmaiah assuming office as Virajpet town president of the party, 07/02/2022
Madanda Thimmaiah assuming office as Virajpet town president of the party ನೂತನವಾಗಿ ವಿರಾಜಪೇಟೆ ಪಟ್ಟಣ ಅಧ್ಯಕ್ಷರಾಗಿ ಮಾದಂಡ ತಿಮ್ಮಯ್ಯ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ, ಅವರಿಗೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ನೀಡಿ, ಅವರಿಗೆ ಸಂಪೂರ್ಣ ಬೆಂಬಲ ಹಾಗೂ ಸಹಕಾರದ ಆಶ್ವಾಸನೆಯನ್ನು ಕೊಟ್ಟು, ಪಕ್ಷವನ್ನು ಸದೃಢವಾಗಿ ಕಟ್ಟುವಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎನ್ನುವ ಸಲಹೆಯನ್ನು ಕೂಡ ನೀಡಿದೆ. ಹದಿನಾಲ್ಕು ಅಂತಾರಾಷ್ಟ್ರೀಯ ರಗ್ಬಿ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಾದ ತಿಮ್ಮಯ್ಯ ಅವರು ತಮ್ಮ ಎಲ್ಲಾ ಕೌಶಲ್ಯ ಹಾಗೂ ಅನುಭವಗಳನ್ನು ಬಳಸಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತಾರೆ ಎನ್ನುವ ಭರವಸೆ ಇದೆ.




Humble tributes to India's nightingale, Bharat Ratna LataMangeshkar, 06/02/2022
ಗಾನ ಕೋಗಿಲೆ #ಲತಾಮಂಗೇಶ್ಕರ್ ಅವರ ನಿಧನದ ಸುದ್ದಿ ಆಘಾತ ತಂದಿದೆ. ಹಲವು ಪೀಳಿಗೆಗಳ ಸಂಗೀತ ರಸಿಕರಿಗೆ ತಮ್ಮ ಹಾಡುಗಳ ಮಾಂತ್ರಿಕತೆಯಿಂದ ಮೋಡಿಮಾಡಿದ ಭಾರತ ರತ್ನಕ್ಕೆ ನನ್ನ ಅಶ್ರುನಮನಗಳು. My humble tributes to India's nightingale, Bharat Ratna #LataMangeshkar. She will forever live in our hearts through her songs 



Inauguration of the new party office in Ponnampet, Kodagu, 06/02/2022
Inauguration of the new party office in Ponnampet, Kodagu, on Saturday.
ಹೊಸದಾಗಿ ಕಾಂಗ್ರೆಸ್ ಪಕ್ಷದ ಪೊನ್ನಂಪೇಟ್ ಬ್ಲಾಕ್'ನ ವಲಯ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಭಾಗವಹಿಸಿದ ಸಂದರ್ಭ. ಈ ಭಾಗದ ಕಾಂಗ್ರೆಸ್ ಪಕ್ಷದ ಅತಿ ಹಿರಿಯ ನಾಯಕರಾದಂತಹ ಮನೆಯಪಂಡ ವಿಠಲ್ ಅಪ್ಪಯ್ಯ ಉದ್ಘಾಟಿಸಿದರು.
ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯರು, ಹಿರಿಯ ನಾಯಕರು, ಈ ಕಾರ್ಯಕ್ರಮದಲ್ಲಿ ಅತಿ ಉತ್ಸಾಹದಿಂದ ಭಾಗವಹಿಸಿದರು. ಕಾಂಗ್ರೆಸ್ ಪಕ್ಷವನ್ನು ಮುಂದಿನ ದಿನಗಳಲ್ಲಿ ಎಲ್ಲರು ಜೊತೆ ಸೇರಿ, ಹಿರಿಯರ ಮಾರ್ಗದರ್ಶನದಲ್ಲಿ, ಯುವಕರ ಸಹಯೋಗದೊಂದಿಗೆ, ಕಟ್ಟುವಂತ ದೃಢ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
Gonikoppa Premier League cricket tournament by Youth Wing, 29/01/2022
Gonikoppa Premier League cricket tournament by Youth Wing
7 Star ಯೂತ್ ವಿಂಗ್, ಗೋಣಿಕೊಪ್ಪ ಅವರು ಆಯೋಜಿಸಿದ್ದ 6ನೇ ವರ್ಷದ ಗೋಣಿಕೊಪ್ಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರಂಭದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳು ಹಾಗೂ ಆಯೋಜಕರಿಗೆ ಶುಭಕೋರಿದ ಸಂಧರ್ಭ. ಕೊಡಗು ಜಿಲ್ಲೆಯಿಂದ ಸಾಕಷ್ಟು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ. ಸ್ಥಳೀಯವಾಗಿ ಆಯೋಜಿಸುವ ಈ ರೀತಿಯ ಪಂದ್ಯಾವಳಿಗಳಿಂದ ಇನ್ನಷ್ಟು ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ. ಪಂದ್ಯಾವಳಿ ಆಯೋಜಕರು, ಜಿ.ಪಿ.ಎಲ್ ಕುಟುಂಬ ಮತ್ತು ಪ್ಲಾಗೊಂಡ ಎಲ್ಲಾ ಕ್ರೀಡಾಪ್ರೇಮಿಗಳಿಗೂ ಅಭಿನಂದನೆಗಳು.


Meeting of party workers at Koyanadu, 29/01/2022
ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್ ಮೊಹಿದಿನ್ ಕುಂಞ ರವರ ಕೊಯನಾಡು ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಸಂದರ್ಭ. ಸಭೆಯಲ್ಲಿ ಮಾಜಿ ಕೊಡಗು ಡಿಸಿಸಿ ಸದಸ್ಯರಾದ ಎನ್.ಸಿ ಮನೋಹರ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮನಾಥ, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಪಿ.ಎಲ್ ಸುರೇಶ್, ಮುಖಡರಾದ ಗಣಪಯ್ಯ, ಕನ್ಯಾನ ವಿಜಯಕುಮಾರ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ ಹನೀಫ್, ನಾಯಕರಾದ ವಾಸು ಪೂಜಾರಿ, ಬ್ಲಾಕ್ ಕಾಂಗ್ರೆಸ್ ನಾಯಕಿ ಕೆ.ಕೆ ರಾಜೇಶ್ವರಿ, ಪಂಚಾಯತ್ ಸದಸ್ಯ ಗಿರೀಶ್, ಚೆಂಬು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಚೆಂಬು ಸಂಪಾಜೆಯ ಎಲ್ಲಾ ಕಾರ್ಯಕರ್ತರು ಭಾಗವಹಿಸಿದರು.




