Happy Kaveri Sankramana 2022, 17/10/2022
ನಮ್ಮ ನಾಡಿನ ಸಮಸ್ತ ಜನತೆಗೂ ತಾಯಿ ಕಾವೇರಿ ಸಂಕ್ರಮಣದ ಹಾರ್ದಿಕ ಶುಭಾಶಯಗಳು. ಸಾವಿರಾರು ವರ್ಷಗಳಿಂದ ಕೊಡಗಿನ ಜನರನ್ನು, ಇಲ್ಲಿನ ಕಾಡು, ಸಸ್ಯ ವನ್ಯಜೀವಿಗಳಿಗೆ ಜೀವನದಿಯಾದ ತಾಯಿಯ ಆಶೀರ್ವಾದ ಮತ್ತು ಕರುಣೆ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
ಕೊಡಗಿನ ಪ್ರತಿಯೊಬ್ಬರಿಗೂ ಇಂದು ಕಾವೇರಿ ತೀರ್ಥೋದ್ಭವದ ಹಬ್ಬ ಆಚರಣೆ. ನಮ್ಮ ಕುಲದೇವತೆ ಮತ್ತೊಮ್ಮೆ ನಮಗೆ ತನ್ನ ಸಾಕ್ಷಾತ್ ದರ್ಶನ ಕೊಡುವ ದಿನ. ಸಕಲ ಜೀವರಾಶಿಗಳಿಗೆ ಒಳಿತನ್ನು ಮಾಡುವ ತಾಯಿಗೆ ನನ್ನ ಭಕ್ತಿಪೂರ್ವಕ ನಮನಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #Harangi #Cauvery #Kaveri #Teerthodbhava #Sankramana

Visit to Ex-Serviceman's home, 17/10/2022
ಅಪಘಾತಕ್ಕೆ ಒಳಗಾಗಿದ್ದ ಮಾಜಿ ಸೈನಿಕರಾದ ಮತ್ರಂಡ (Matharanda) ವಸಂತ್ ಅವರು ಕಳೆದ ಒಂದೂವರೆ ವರ್ಷದಿಂದ ಚಿಕಿತ್ಸೆ ಪಡೆಯುತ್ತಿರುವ ವಿಚಾರ ಅವರ ಮನೆಯವರಿಂದ ತಿಳಿದು ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದೆ. ವಸಂತ್ ಮತ್ತು ಅವರ ಕುಟುಂಬದವರಿಗೆ ಧೈರ್ಯ ಹೇಳಿ ಚಿಕಿತ್ಸೆಗೆ ನನ್ನ ಕೈಲಾದ ಸಹಾಯವನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅವರಿಗೆ ಮಾಡಬಹುದಾದ ಸಹಾಯವನ್ನು ಮಾಡುವ ಭರವಸೆಯನ್ನು ನೀಡಿದ್ದೇನೆ.
ದೇಶದ ರಕ್ಷಣೆ ಮಾಡಿದ ಸೈನಿಕನನ್ನು ರಸ್ತೆ ಅಪಘಾತ ಮಾಡಿ ಸ್ಥಳದಲ್ಲೇ ಬಿಟ್ಟುಹೋದ ಘಟನೆ ಬಗ್ಗೆ ಕೇಳಿ ಮನಸ್ಸಿಗೆ ನೋವಾಗಿದೆ. ವಸಂತ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲ್ಲಿ ಮತ್ತು ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #Harangi

Seeking the blessings of Mother Kaveri on Theerthodbhava , 15/10/2022
ಕೊಡಗಿನ ಕುಲದೇವತೆ, ತೀರ್ಥರೂಪಿಣಿ ಶ್ರೀ ಕಾವೇರಿ ಮಾತೆಯ ತೀರ್ಥೋದ್ಭವ ಕಾರ್ಯಕ್ರಮ ಇದೇ ತಿಂಗಳ 17 ರಂದು ಜರುಗಲಿದ್ದು, ಇದರಲ್ಲಿ ಪಾಲ್ಗೊಂಡು ತಾಯಿಯ ಆಶೀರ್ವಾದ ಪಡೆಯಲು ಬರುವ ಎಲ್ಲಾ ಭಕ್ತಾದಿಗಳಿಗೂ ಶುಭ ಹಾರೈಕೆಗಳು.
ಸಾವಿರಾರು ವರ್ಷಗಳಿಂದ ಕೊಡಗಿನ ಜನರ ಭಾವನೆಗಳಿಗೆ, ಧಾರ್ಮಿಕ ನಂಬಿಕೆಗಳಿಗೆ ಸಾಕ್ಷಿಯಾಗಿರುವ ಈ ಕಾರ್ಯಕ್ರಮ ಲಕ್ಷಾಂತರ ಜನರ ಸಮ್ಮುಖದಲ್ಲಿ ಸುಸೂತ್ರವಾಗಿ ನಡೆದು ಕಾವೇರಿ ತಾಯಿಯ ತೀರ್ಥೋದ್ಭವ ದರ್ಶನದ ಜೊತೆಗೆ ಆಕೆಯ ಆಶೀರ್ವಾದ ದೊರೆಯಲಿ ಎಂದು ಪ್ರಾರ್ಥಿಸುತೇನೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #Theerthodbhava #Sankramana

Former Defence officers meet Rahul Gandhi with A.S. Ponnanna, 13/10/2022
Former Defence officers meet Rahul Gandhi with A.S. Ponnanna. ರಾಹುಲ್ ಗಾಂಧಿ ಭೇಟಿ ಮಾಡಿದ ಮಾಜಿ ಸೈನಿಕರು ಮತ್ತು ಎ ಎಸ್ ಪೊನ್ನಣ್ಣ
ದಿನಾಂಕ 11-10-2022 ರಂದು ಪಕ್ಷದ ಭಾರತ ಐಕ್ಯತಾ ಯಾತ್ರೆಯು, ಚಿತ್ರದುರ್ಗದ ಹಿರಿಯೂರು ತಾಲ್ಲೂಕು ತಲುಪಿದಾಗ, ಪಕ್ಷದ ಕಾನೂನು, ಮಾನವ ಹಕ್ಕು ಹಾಗೂ ಆರ್.ಟಿ.ಐ ಘಟಕದ ಅಧ್ಯಕ್ಷನಾಗಿ ಮತ್ತು ಕೊಡಗಿನ ಮಾಜಿ ಸೈನಿಕರು ಮತ್ತು ಅಧಿಕಾರಿಗಳ ನಿಯೋಗದೊಂದಿಗೆ ಶ್ರೀ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದೆ.
ಶ್ರೀ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ತಂಡದಲ್ಲಿ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ, ಬ್ರಿಗೇಡಿಯರ್ ಪಿ.ಟಿ.ಮೊನ್ನಪ್ಪ, ಕೋಮಾಡಾರ್ ಜಿ.ಜೆ.ಸಿಂಗ್, ಹಾಗೂ ಮೇಜರ್ ಸಿ.ಯು.ಮೊನ್ನಪ್ಪ ಭಾಗಿಯಾಗಿದ್ದರು.
ಈ ಸಂಧರ್ಭದಲ್ಲಿ ರಾಹುಲ್ ಗಾಂಧಿ ಅವರ ಜೊತೆ ಚರ್ಚೆ ಮಾಡಿ, ಮಾಜಿ ಸೈನಿಕರಿಗೆ ಸಿಗಬೇಕಾದ ಭೂ-ಮಂಜೂರಾತಿ (ಸರ್ಕಾರಿ ಗ್ರಾಂಟ್) ಗಳನ್ನು ಸರ್ಕಾರ ನೀಡುವಲ್ಲಿ ವಿಫಲವಾಗಿರುವ ಬಗ್ಗೆ ತಿಳಿಸಲಾಯಿತು. ಇದೇ ರೀತಿ ಸೈನಿಕರ ವಿಧವೆಯರು (war widows) ಗಳಿಗೆ ಪೆನ್ಶನ್ ನೀಡುವಲ್ಲಿ ಆಗಬೇಕಾದ ಕ್ರಮಗಳ ಬಗ್ಗೆ ವಿವರಿಸಲಾಯಿತು.
ಕೊಡಗು, ದೇಶಕ್ಕೆ ಹಲವಾರು ಸೈನಿಕರನ್ನು ಕೊಟ್ಟ ಪ್ರದೇಶ. ಸೈನ್ಯಕ್ಕೆ ನಡೆಯುವ ಆಯ್ಕೆ-ನೇಮಕಾತಿ ಪ್ರಕ್ರಿಯೆಯನ್ನು ಇಲ್ಲೇ ನಡೆಸುವ ಬಗ್ಗೆ ಅವರಿಗೆ ವಿಷಯ ಮನವರಿಕೆ ಮಾಡಲಾಯಿತು. ಹಲವಾರು ಅಂತರಾಷ್ಟ್ರೀಯ ಹಾಕಿ ಕ್ರೀಡಾಪಟುಗಳನ್ನು ಕೊಡುಗೆ ಕೊಟ್ಟ ನಮ್ಮ ಜಿಲ್ಲೆಗೆ ಸುಸಜ್ಜಿತ ಆಧುನಿಕ ಹಾಕಿ ಕ್ರೀಡಾಂಗಣದ ಅವಶ್ಯಕತೆ ಬಗ್ಗೆ ಅವರಿಗೆ ತಿಳಿಸಲಾಯಿತು.
ಇದರ ಜೊತೆಗೆ ಕೊಡಗು ಜಿಲ್ಲೆಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ರಾಹುಲ್ ಗಾಂಧಿ ಅವರ ಜೊತೆ ದೀರ್ಘ ಸಮಾಲೋಚನೆ ನಡೆಸಿದೆ. ಅವರ ಸಕಾರಾತ್ಮಕ ಬೆಂಬಲ ಎಲ್ಲಾ ಬೇಡಿಕೆಗಳ ಮೇಲು ಇದೆ.
ಇದೇ ಸಂಧರ್ಬದಲ್ಲಿ ರಾಹುಲ್ ಗಾಂಧಿ ಅವರಿಗೆ ಕೊಡಗಿನ ಸಾಂಪ್ರದಾಯಿಕ ಪೀಚೆ ಕತ್ತಿಯನ್ನು ಉಡುಗೊರೆಯಾಗಿ ಕೊಟ್ಟು ಅಭಿನಂದಿಸಿದೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Hudikeri #Gonikoppal #Shivakeri #Talakaveri #LegalCell #BharatJodo #BharataAikyataYatre #RahulGandhi








Book release function, 10/10/2022
Book release function. ಪುಸ್ತಕ ಬಿಡುಗಡೆ ಕಾರ್ಯಕ್ರಮ
ಹುದಿಕೇರಿ ಕೊಡವ ಸಮಾಜದಲ್ಲಿ, ಕೊಡವ ಕೂಟಾಳಿಯಡ ಕೂಟದವರು ಆಯೋಜಿಸಿದ್ದ ಪದ್ದತಿ ಪಡಿಕನ, ಸಮ್ಮಂದ ಅಡ್ಕನಾ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆ.
ಪುಸ್ತಕ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ನಮ್ಮ ಬಾಷೆ ಉಳಿವಿನೊಂದಿಗೆ ನಮ್ಮ ಪದ್ಧತಿಗಳು ಉಳಿಯುತ್ತವೆ. ನಮ್ಮ ಭಾಷೆ, ಸಂಸ್ಕೃತಿ ಮತ್ತು ಪದ್ಧತಿಗಳ ಬಗ್ಗೆ ಪುಸ್ತಕಗಳನ್ನು ಬರೆದಾಗ ಅವುಗಳನ್ನು ಉಳಿಸಲು ಅನುಕೂಲವಾಗುತ್ತದೆ. ಭಾಷೆ ಕೇವಲ ವ್ಯವಹಾರಕ್ಕೆ ಸೀಮಿತವಾಗಾಬಾರದು. ಅವು ನಮ್ಮ ಸಂಸ್ಕೃತಿಯ ಪ್ರತೀಕ.
ಕೋಟ್ಯಂತರ ಜನ ಮಾತನಾಡುವ ಕನ್ನಡಕ್ಕೆ 2,100 ರ ವೇಳೆಗೆ ಅಪಾಯ ಇದೆ ಎಂದು ಬಾಷಾತಜ್ಞರು ಎಚ್ಚರಿಸಿದ್ದಾರೆ. ಇನ್ನು ಕೇವಲ ಒಂದು ಲಕ್ಷದ ಐವತ್ತು ಸಾವಿರ ಜನ ಮಾತನಾಡುವ ಕೊಡವ ಭಾಷೆಗೆ ಅಪಾಯ ತಪ್ಪಿದ್ದಲ್ಲ. ನಮ್ಮ ಭಾಷೆ ಜೊತೆಗೆ ನಮ್ಮ ಸಂಸ್ಕೃತಿ ಉಳಿಸುವ ಕೆಲಸ ನಾವು ಮಾಡಬೇಕು.
ಈ ನಿಟ್ಟಿನಲ್ಲಿ ಕೊಡವ ಕೂಟಾಳಿಯಡ ಕೂಟ ಮುಂತಾದ ಸಂಘಟನೆಗಳು ಮಾಡುತ್ತಿರುವ ಕೆಲಸ ಶ್ಲಾಘನೀಯ. ಅವರಿಗೆ ನನ್ನ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Hudikeri #Gonikoppal #Shivakeri #Talakaveri #LegalCell #Kodava #Kannada #Traditions
