Pre-election 2018 meeting of booth, zone and block level workers was held, 22/04/2018

ಕೊಡಗು ಜಿಲ್ಲಾ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ವತಿಯಿಂದ 2018ರ ಚುನಾವಣಾ ಪೂರ್ವಭಾವಿ ಬೂತ್,ವಲಯ,ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಕಲ್ ರಮಾನಾಥ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು..ಈ ಸಭೆಯಲ್ಲಿ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅರುಣ್ ಮಾಚಯ್ಯ ರವರು ಪಾಲ್ಗೊಂಡು ಕಾರ್ಯಕರ್ತರನ್ನು ಹುರಿದುಂಬಿಸಿದರು..
 
 
img
 

The government has sanctioned a grant of Rs.50 crore for road development in Kodagu district., 04/03/2018

ಕೊಡಗು ಜಿಲ್ಲೆಯ ರಸ್ತೆ ಅಭಿವೃದ್ಧಿಗಾಗಿ ರೂ.50 ಕೋಟಿ ಅನುದಾನಕ್ಕೆ ಸರಕಾರ ಮಂಜೂರಾತಿ ನೀಡಿದೆ. ಈ ಅನುದಾನ ಮಂಜೂರು ಮಾಡಲು ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರಾದ ಕದ್ದಣಿಯಂಡ ಹರೀಶ್ ಬೋಪಣ್ಣನವರಿಗೆ ಕೃತಜ್ಞತೆಗಳು…
 
 
img
 

Napanda Muttappa participated and laid the foundation stone of the Sabha Bhavan to be constructed in the Kanna_Balamurri temple premises, 22/02/2018

ಕೊಡಗು ಜಿಲ್ಲೆಯ ಮೂರ್ನಾಡಿನ #ಕಣ್ಣ_ಬಲಮುರಿ ದೇವಾಲಯದ ಚಂಡಿಕಾಯಾಗದಲ್ಲಿ ರಾಜ್ಯ ಐ.ಎನ್. ಟಿ.ಯು.ಸಿ.ಉಪಾಧ್ಯಕ್ಷರಾದ ನಾಪಂಡ ಮುಟ್ಟಪ್ಪರವರು ಪಾಲ್ಗೊಂಡು ದೇವಾಲಯದ ಆವರಣದಲ್ಲಿ ನಿರ್ಮಾಣವಾಗಲಿರುವ ಸಭಾ ಭವನ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ, ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
 
 
img
 

Shri Veena Acchaiah, Member of the Karnataka Legislative Council, laid the foundation stone for works worth about 64 lakhs, 29/12/2017

ಕೊಡಗು ಜಿಲ್ಲೆಯ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 64 ಲಕ್ಷದ ಕಾಮಗಾರಿಗಳಿಗೆ ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ವೀಣಾ ಅಚ್ಚಯ್ಯನವರು ಶಿಲಾನ್ಯಾಸವನ್ನು ನೆರವೇರಿಸಿದರು.
 
 
img
 

Hon'ble Chief Minister Siddaramaiah met the Union Minister Suresh Prabhu and requested to stop the import of black pepper at low prices, 07/12/2017

ಕೊಡಗು ಮತ್ತು ಚಿಕ್ಕಮಗಳೂರು ವ್ಯಾಪ್ತಿಯ ರೈತರ ಬೇಡಿಕೆಗೆ ಸ್ಪಂದನವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೇಂದ್ರ ಸಚಿವರಾದ ಸುರೇಶ್ ಪ್ರಭು ರವರನ್ನು ಭೇಟಿಯಾಗಿ ಕಡಿಮೆ ಬೆಲೆಗೆ ಆಮದಾಗುವ ಕರಿಮೆಣಸನ್ನು ನಿಲ್ಲಿಸಿ ನಮ್ಮ ರೈತರು ಬೆಳೆದ ಕರಿಮೆಣಸಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕೆಂದು ಕೋರಿದರು.. ಈ ಸಂದರ್ಭದಲ್ಲಿ ಸಚಿವರು ಇದಕ್ಕೆ ಸ್ಪಂದಿಸಿ ಆಮದಾಗುತ್ತಿರುವ ಕರಿಮೆಣಸಿಗೆ ಅತೀ ಕಡಿಮೆ ದರವಾಗಿ ರೂ.500 ರನ್ನು ನಿಗದಿಪಡಿಸಿ ರೈತರಿಗೆ ನೆರವಾಗುವುದಾಗಿ ತಿಳಿಸಿದರು..
 
 
img