TV 1 NEWS UPDATE, 23/05/2025
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರ ಭೇಟಿ
-------------------
ವಿರಾಜಪೇಟೆ
ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿ ಕುಟ್ಟಿರ.ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಇಂದು ಕೊಡಗಿನ ಕಾಂಗ್ರೆಸ್ ನಾಯಕರುಗಳ ನಿಯೋಗವು ಹಲವು ಬೇಡಿಕೆಗಳೊಂದಿಗೆ ಮುಜುರಾಯಿ ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ರಾಮಲಿಂಗ ರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಪ್ರಮುಖವಾಗಿ ಕೊಡಗಿನ ದೇವಸ್ಥಾನಗಳ ಅಭಿವೃದ್ಧಿಗೆ ಹಾಗು ಗ್ರಾಮೀಣ ಪ್ರದೇಶಗಳಿಗೆ ಹೊಸ ಬಸ್ ಮಾರ್ಗಗಳನ್ನು ನೀಡುವ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಮಾನ್ಯ ಸಚಿವರು ಪೂರಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಾನಂಡ ಪ್ರತ್ಯು, ದೇವಸ್ಥಾನದ ಅಧ್ಯಕ್ಷರಾದ ಅದೇಂಗಡ ವಾಸು ಬೆಳ್ಳಿಯಪ್ಪ, ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯ ಅದೇಂಗಡ ವಿನು ಉತ್ತಪ್ಪ ಉಪಸ್ಥಿತರಿದ್ದರು.
-------------------
ವಿರಾಜಪೇಟೆ
ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿ ಕುಟ್ಟಿರ.ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಇಂದು ಕೊಡಗಿನ ಕಾಂಗ್ರೆಸ್ ನಾಯಕರುಗಳ ನಿಯೋಗವು ಹಲವು ಬೇಡಿಕೆಗಳೊಂದಿಗೆ ಮುಜುರಾಯಿ ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ರಾಮಲಿಂಗ ರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಪ್ರಮುಖವಾಗಿ ಕೊಡಗಿನ ದೇವಸ್ಥಾನಗಳ ಅಭಿವೃದ್ಧಿಗೆ ಹಾಗು ಗ್ರಾಮೀಣ ಪ್ರದೇಶಗಳಿಗೆ ಹೊಸ ಬಸ್ ಮಾರ್ಗಗಳನ್ನು ನೀಡುವ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಮಾನ್ಯ ಸಚಿವರು ಪೂರಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಾನಂಡ ಪ್ರತ್ಯು, ದೇವಸ್ಥಾನದ ಅಧ್ಯಕ್ಷರಾದ ಅದೇಂಗಡ ವಾಸು ಬೆಳ್ಳಿಯಪ್ಪ, ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯ ಅದೇಂಗಡ ವಿನು ಉತ್ತಪ್ಪ ಉಪಸ್ಥಿತರಿದ್ದರು.

Heart Lamp Wins 2025 International Booker – Congratulations to Banu Mushtaq & Deepa Bhasthi, 22/05/2025
ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ - 2025 ವಿಜೇತರಾದ ಬಾನು ಮುಷ್ತಾಕ್ ಹಾಗೂ ದೀಪ ಭಾಸ್ತಿ ರವರಿಗೆ ಅಭಿನಂದನೆಗಳು.
ಕನ್ನಡದ ಹೆಸರಾಂತ ಲೇಖಕಿಯರಾದ ಬಾನು ಮುಸ್ತಾಕ್ ಹಾಗೂ ದೀಪಾ ಭಾಸ್ತಿ ರವರ ರಚನೆಯಾದ ಹಾರ್ಟ್ ಲ್ಯಾಂಪ್ ಎಂಬ ಸಣ್ಣ ಕಥೆಗಳ ಸಂಕಲನಕ್ಕೆ, 2025 ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ನಮಗೆಲ್ಲರಿಗೂ ಹೆಮ್ಮೆ ಮೂಡಿಸಿದೆ. ಪ್ರತಿಯೊಬ್ಬ ಲೇಖಕನ ಕನಸಾಗಿರುವ ಬೂಕರ್ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗರು ಎಂಬ ಹಿರಿಮೆ ಇವರ ಪಾಲಾಗಿರುವುದು ನಾಡಿಗೆ ಕೀರ್ತಿ ತಂದುಕೊಟ್ಟಿದೆ.
ಮಡಿಕೇರಿ ಮೂಲದ ಲೇಖಕಿ ಹಾಗೂ ಪತ್ರಕರ್ತೆಯಾದ ದೀಪ ಭಾಸ್ತಿ ರವರು, ಬಾನು ಮುಸ್ತಾಕ್ ರವರ ರಚಿತ ಹಾರ್ಟ್ ಲ್ಯಾಂಪ್ ಎಂಬ ಕಥಾ ಸಂಕಲನವನ್ನು, ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದರು.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಕೊಡಗು ಮೂಲದ ದೀಪ ಭಾಸ್ತಿ ಹಾಗೂ ಕನ್ನಡತಿ ಬಾನು ಮುಸ್ತಾಕ್ ರವರಿಗೆ ಮತ್ತೊಮ್ಮೆ ಅಭಿನಂದನೆಗಳು.
ಕನ್ನಡದ ಹೆಸರಾಂತ ಲೇಖಕಿಯರಾದ ಬಾನು ಮುಸ್ತಾಕ್ ಹಾಗೂ ದೀಪಾ ಭಾಸ್ತಿ ರವರ ರಚನೆಯಾದ ಹಾರ್ಟ್ ಲ್ಯಾಂಪ್ ಎಂಬ ಸಣ್ಣ ಕಥೆಗಳ ಸಂಕಲನಕ್ಕೆ, 2025 ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ನಮಗೆಲ್ಲರಿಗೂ ಹೆಮ್ಮೆ ಮೂಡಿಸಿದೆ. ಪ್ರತಿಯೊಬ್ಬ ಲೇಖಕನ ಕನಸಾಗಿರುವ ಬೂಕರ್ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗರು ಎಂಬ ಹಿರಿಮೆ ಇವರ ಪಾಲಾಗಿರುವುದು ನಾಡಿಗೆ ಕೀರ್ತಿ ತಂದುಕೊಟ್ಟಿದೆ.
ಮಡಿಕೇರಿ ಮೂಲದ ಲೇಖಕಿ ಹಾಗೂ ಪತ್ರಕರ್ತೆಯಾದ ದೀಪ ಭಾಸ್ತಿ ರವರು, ಬಾನು ಮುಸ್ತಾಕ್ ರವರ ರಚಿತ ಹಾರ್ಟ್ ಲ್ಯಾಂಪ್ ಎಂಬ ಕಥಾ ಸಂಕಲನವನ್ನು, ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದರು.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಕೊಡಗು ಮೂಲದ ದೀಪ ಭಾಸ್ತಿ ಹಾಗೂ ಕನ್ನಡತಿ ಬಾನು ಮುಸ್ತಾಕ್ ರವರಿಗೆ ಮತ್ತೊಮ್ಮೆ ಅಭಿನಂದನೆಗಳು.

On the occasion of inaugurating the newly developed Gonikoppal Bypass Road and Orange Society Road, 22/05/2025
ನೂತನವಾಗಿ ಅಭಿವೃದ್ಧಿಗೊಂಡ ಗೋಣಿಕೊಪ್ಪಲು ಬೈಪಾಸ್ ರಸ್ತೆ ಹಾಗೂ ಆರೆಂಜ್ ಸೊಸೈಟಿ ರಸ್ತೆಯ ಲೋಕಾರ್ಪಣೆ ನೆರವೇರಿಸಿದ ಸಂದರ್ಭ.

Congratulations were extended to Dr. M.A. Saleem, who visited my office at Vidhana Soudha after taking charge as the new Director General of Police of Karnataka State, 22/05/2025
ನೂತನವಾಗಿ ಕರ್ನಾಟಕ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ವಿಧಾನಸೌಧದ ನನ್ನ ಕಚೇರಿಗೆ ಭೇಟಿ ನೀಡಿದ್ದ ಡಾ. ಎಂ.ಎ ಸಲೀಂ ರವರಿಗೆ ಶುಭ ಕೋರಲಾಯಿತು.

The ground-breaking ceremony was conducted for the special grant-funded project by the state government at the Appangala-Bettageri section of the Madikeri Bhagamandala main road, 13/05/2025
ಮಡಿಕೇರಿ ಭಾಗಮಂಡಲ ಮುಖ್ಯರಸ್ತೆಯ ಅಪ್ಪಂಗಳ-ಬೆಟ್ಟಗೇರಿ ಭಾಗದಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನದಲ್ಲಿ ಭೂಮಿ ಪೂಜೆ ನೇರೆವೆರಿಸಿದ ಸಂದರ್ಭ.
