Cooperatives are the backbone of common people, 14/02/2023

Cooperatives are the backbone of common people. ನೆಲಜಿ ದವಸ ಭಂಡಾರ ಶತಮಾನೋತ್ಸವ ಸಮಾರಂಭ
 
ನಾಪೋಕ್ಲು ಸಮೀಪದ 94ನೇ ನೆಲಜಿ ಸಹಕಾರ ದವಸ ಭಂಡಾರ ನಿಯಮಿತದ ಶತಮಾನೋತ್ಸವ ಸಮಾರಂಭ ಹಾಗೂ ನವೀಕೃತ ಕಟ್ಟಡ ಮತ್ತು ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭಿಕರನ್ನು ಉದ್ದೇಶಿಸಿ ಮಾತನಾಡಿದೆ.
 
ನೆಲಜಿ ಸಹಕಾರ ದವಸ ಭಂಡಾರ ಮಾಡಿರುವ, ಮಾಡುತ್ತಿರುವ ಕೆಲಸಗಳು ಸಹಕಾರಿ ಕ್ಷೇತ್ರದ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ಕಾರಣಕರ್ತರಾದ ನಿಯಮಿತದ ಎಲ್ಲಾ ಸದಸ್ಯರಿಗೂ ನನ್ನ ಅಭಿನಂದನೆಗಳು.
 
ಈ ಸಂದರ್ಭದಲ್ಲಿ ಭ್ರಷ್ಟಾಚಾರ ಹೇಗೆ ಮೇಲಿನಿಂದ ಕೆಳಗಿನ ಸ್ತರಕ್ಕೆ ಪಸರಿಸುತ್ತದೆ ಎಂಬುದರ ಬಗ್ಗೆ ವಿವರಿಸಿ, ಉನ್ನತ ಸ್ಥಾನದಲ್ಲಿ ಇರುವವರು ಸಮಾಜಕ್ಕೆ ಮೇಲ್ಪಂಕ್ತಿ ಆಗಬೇಕು ಎಂಬುವ ವಿಚಾರ ತಿಳಿಸಿದೆ. ಮೈಸೂರಿನ ಕಾಫಿ ಸೊಸೈಟಿಯ ಉದಾಹರಣೆಯನ್ನು ಕೊಟ್ಟು ಹೇಗೆ ನಾನು ಹೆಚ್ಚುವರಿ ಅಡ್ವೊಕೇಟ್ ಜನೆರಲ್ ಆಗಿದ್ದಾಗ ಅಲ್ಲಿ ನಡೆಯಬಹುದಾಗಿದ್ದ ಅನಾಹುತ ತಪ್ಪಿಸಿದೆ ಎಂದು ವಿವರಿಸಿದೆ. ಸಹಕಾರ ಕ್ಷೇತ್ರ ಅಧಿಕಾರಿಗಳ ಹಸ್ತಕ್ಷೇಪವನ್ನು ಕಾನೂನು ರೀತಿ ತಡೆಯಬೇಕು ಎಂದು ತಿಳಿಸಿದೆ.
 
ಇಪ್ಪತ್ತು ವರ್ಷಗಳ ಹಿಂದೆ ಸಂವಿಧಾನಕ್ಕೆ ತಿದ್ದುಪಡಿ ತಂದು ಸಹಕಾರ ಸಂಘಟನೆ ಮಾಡುವುದನ್ನು ಮೂಲಭೂತ ಹಕ್ಕನ್ನಾಗಿ ಮಾಡಿರುವ ಬಗ್ಗೆ ವಿವರಿಸಿ ನಮ್ಮ ಈ ಮೂಲಭೂತ ಹಕ್ಕನ್ನು ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಬಗ್ಗೆ ಮಾತನಾಡಿದೆ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kutta #Nalkeri
 
 
img
 

Tiger attacks; shocking and shameful, 13/02/2023

Tiger attacks; shocking and shameful. ಹುಲಿ ದಾಳಿ ಆಘಾತಕಾರಿ
 
ಕೊಡಗಿನಲ್ಲಿ ಎರಡು ದಿನಗಳಲ್ಲಿ ಒಂದೇ ಕುಟುಂಬದ ಇಬ್ಬರು ಹುಲಿ ದಾಳಿಗೆ ತುತ್ತಾಗಿರುವುದು ಅತ್ಯಂತ ಸಂಕಟದ ವಿಷಯ. ಈ ಆಘಾತಕಾರಿ ಬೆಳವಣಿಗೆಯ ಮುನ್ಸೂಚನೆ ಇದ್ದರೂ ಯಾವುದೇ ಮುಂಜಾಗ್ರತೆಯ ಕ್ರಮಗಳು ಇಲ್ಲದಿರುವುದು ಬೇಸರ ತಂದಿದೆ.
 
ಪಲ್ಲೆರಿಯ ರಾಜು ಈಗ ಸ್ವಲ್ಪ ಸಮಯದ ಮುಂಚೆ ಹುಲಿ ದಾಳಿಗೆ ಬಲಿಯಾಗಿದ್ದಾರೆ. ನಿನ್ನೆ ಅವರ ಮೊಮ್ಮೊಗ ಚೇತನ್ ಹುಲಿ ದಾಳಿಗೆ ಬಲಿಯಾಗಿ ಅವರ ತಂದೆ ಮಧು ಅವರು ಕೂಡ ಗಾಯಗೊಂಡಿದ್ದಾರೆ. ಇವರ ಕುಟುಂಬದ ಈ ಚಿಂತಾಜನಕ ಸ್ಥಿತಿಯಲ್ಲಿ ನಮ್ಮೆಲ್ಲರ ಬೆಂಬಲ ಅವರಿಗೆ ಅವಶ್ಯಕತೆ ಇದೆ.
 
ಕೊಡಗಿನಲ್ಲಿ ದಿನದಿಂದ ದಿನಕ್ಕೆ ಮನುಷ್ಯರ ಮೇಲೆ, ರೈತರ ಬೆಳೆಗಳ ಮೇಲೆ ಕಾಡು ಪ್ರಾಣಿಗಳ ದಾಳಿ ಹೆಚ್ಚಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕು. ದಾಳಿಯಾದಾಗ ಮಾತ್ರ ಅರಣ್ಯ ಇಲಾಖೆ ಚುರುಕಾಗುವುದು ಪರಿಹಾರವಲ್ಲ. ಸ್ಥಳದಲ್ಲಿ ಆಡಳಿತದ ಯಾವುದೇ ಪ್ರತಿನಿಧಿ, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಬರದೇ ಇರುವುದೇ ಒಂದು ಸೋಜಿಗ. ಹಲವಾರು ವರ್ಷಗಳಿಂದ ಜನರು ಕೊಟ್ಟಿರುವ ಮನವಿಗಳನ್ನು ಇನ್ನಾದರೂ ಪರಿಗಣಿಸಿ ವನ್ಯ ಜೀವಿಗಳ ದಾಳಿಯನ್ನು ತಡೆಯಬೇಕು.
 
#TigerAttack #Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Chiniwada #Gonikoppa #Shivakeri #Chennayyanakote #Pollibetta #Devapura #Amangeri #Kunda #KodavaSong Tofer attacks; Shocking and Shameful
 
 
img
 

Successful meet of workers from Kutta, K Badaga and Nalkeri, 09/02/2023

Successful meet of workers from Kutta, K Badaga and Nalkeri
 
ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ, ಕೆ.ಬಡಗ, ನಾಲ್ಕೇರಿ ವಲಯದ ಪಕ್ಷದ ಬೃಹತ್ ಸಮಾವೇಶ ಯಶಸ್ವಿಯಾಗಿ ನೆರವೇರಿತು. ಬೇರೆ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾದುದು ಜನರಲ್ಲಿ ನಮ್ಮ ಮೇಲಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿತ್ತು.
 
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಸಂಘಟಿತರಾಗಿ ನಾವು ಕೆಲಸ ಮಾಡಿದಲ್ಲಿ, ಈಗಿನ ಶಾಸಕರ ವಿರುದ್ಧ ಜನರಿಗಿರುವ ಆಕ್ರೋಶ ಮತ್ತು ನಿರಾಸೆ ನಮ್ಮ ಪಕ್ಷದ ಗೆಲುವಿಗೆ ಕಾರಣವಾಗಲಿದೆ ಎಂದು ತಿಳಿಸಿದೆ. ಸಾಮಾನ್ಯ ಜನರು ಬದಲಾವಣೆ ಎದುರು ನೋಡುತ್ತಿದ್ದಾರೆ. ನಮ್ಮ ಕಾರ್ಯಕರ್ತರು, ಮುಖಂಡರು ಮತ್ತು ಬೆಂಬಲಿಗರು ಒಗ್ಗಟ್ಟಿನಿಂದ
 
ಈ ಬೃಹತ್ ಸಭೆಯನ್ನು ಯಶಸ್ವಿಗೊಳಿಸಿದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಸ್ಥಳೀಯ ಮುಖಂಡರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kutta #Nalkeri
 
 
img
 

The Legends Kabaddi tournament in Virajpet, 07/02/2023

The Legends Kabaddi tournament in Virajpet. ತೋರದಲ್ಲಿ ಕಬಡ್ಡಿ ಪಂದ್ಯಾವಳಿಯ ಉದ್ಘಾಟನೆ
 
ವಿರಾಜಪೇಟೆಯ ತೋರ ಗ್ರಾಮದಲ್ಲಿ ದಿ ಲೆಜೆಂಡ್ಸ್ ಸಂಸ್ಥೆಯವರು ಆಯೋಜಿಸಿದ್ದ ಮೂರನೇ ವರ್ಷದ ಟಿ.ಕೆ.ಪಿ.ಎಲ್ ಕಬಡ್ಡಿ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಆಟಗಾರರಿಗೆ ಮತ್ತು ಆಯೋಜಕರಿಗೆ ಶುಭ ಕೋರಿದೆ.
 
ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಈ ರೀತಿಯ ಪಂದ್ಯಾವಳಿಯನ್ನು ಉತ್ತೇಜಿಸುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಂಗಣ ಸೌಕರ್ಯಗಳನ್ನು ಒದಗಿಸುವುದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದೆ. ದೇಶದಲ್ಲೇ ಕ್ರೀಡೆಗೆ ಹೆಸರುವಾಸಿಯಾದ ಕೊಡಗು ಈ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಕ್ರೀಡಾ ಸೌಕರ್ಯಗಳನ್ನು ಗ್ರಾಮೀಣ ಮಟ್ಟದಲ್ಲೇ ಕಟ್ಟಬೇಕು ಎನ್ನುವುದು ನನ್ನ ಅಚಲ ವಾದ.
 
ಬಹಳ ಸ್ಪರ್ದಾತ್ಮಕವಾಗಿ ನಡೆದ ಕ್ರೀಡಾಕೂಟವನ್ನು ಆಯೋಜಿಸಿದ್ದ ದಿ ಲೆಜೆಂಡ್ಸ್ ಆಯೋಜಕರಿಗೂ ಮತ್ತು ಪಾಲ್ಗೊಂಡ ಎಲ್ಲಾ ಆಟಗಾರರಿಗೂ ನನ್ನ ಅಭಿನಂದನೆ ಮತ್ತು ಶುಭಾಶಯಗಳು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kotekoppa
 
 
img
 

AS Ponnanna's social work in January 2023, 07/02/2023

AS Ponnanna's social work in January 2023. ಜನವರಿ ತಿಂಗಳಲ್ಲಿ ಎ.ಎಸ್.ಪೊನ್ನಣ್ಣ ಅವರ ಸಾಮಾಜಿಕ ಕಾರ್ಯಕ್ರಮಗಳು
 
ಕಳೆದ ಕಾಲು ಶತಮಾನ ವಕೀಲಿ ವೃತ್ತಿಯಲ್ಲಿ ರಾಜ್ಯದ, ರಾಷ್ಟ್ರದ ಗಮನ ಸೆಳೆಯುವಂತ ನ್ಯಾಯಾಂಗ ಪ್ರಕರಣಗಳನ್ನು ನಿಭಾಯಿಸಿದ ಅಜ್ಜಿಕುಟ್ಟೀರ ಸುಬ್ಬಯ್ಯ ಪೊನ್ನಣ್ಣ (ಎ.ಎಸ್.ಪೊನ್ನಣ್ಣ) ಸದಾ ಸಮಾಜಮುಖಿಯಾಗಿ ಯೋಚಿಸುವವರು. ತಮ್ಮ ಮೂಲವನ್ನು ಎಂದೂ ಮರೆಯದ ಅವರು ಕಳೆದ ಹಲವಾರು ವರ್ಷಗಳಿಂದ ಕೊಡಗಿನಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಕೀಯ ಪ್ರವೇಶಕ್ಕೂ ಮುಂಚಿನಿಂದಲೂ ಅವರ ಸಮಾಜ ಸೇವೆ ಅನಿರತವಾಗಿ ನಡೆದಿದೆ. ಈ ವರ್ಷ ಜನವರಿ ತಿಂಗಳೊಂದರಲ್ಲೇ ಕೊಡಗಿನಾದ್ಯಂತ ಅವರ ಸಮಾಜಮುಖಿ ಕೆಲಸಗಳ ಒಂದು ಕಿರು ನೋಟ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kotekoppa