Protest against price rise, 07/04/2022

ಪಕ್ಷದ ಕುಟ್ಟ ವಲಯ ಆಯೋಜಿಸಿದ್ದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮತ್ತು ಆ ಭಾಗದ ಪ್ರಮುಖರು ಪಕ್ಷ ಸೇರುವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ಕುಟ್ಟ ಬಸ್ ನಿಲ್ದಾಣದಿಂದ ಕೊಡವ ಸಮಾಜದ ವರೆಗೂ ಪಾದಯಾತ್ರೆ ಮೂಲಕ ಬಂದ ನೂರಾರು ಪಕ್ಷದ ಬಂಧುಗಳನ್ನು ಉದ್ದೇಶಿಸಿ ಮಾತನಾಡಿದೆವು.

ಮುಕ್ಕತಿರ ನವೀನ್, ಅಪ್ಪಯ್ಯ, ಚೆಂಗಪ್ಪ, ದರ್ಶನ್, ಉಮೇರ್ ಮತ್ತಿತರರು ಪಕ್ಷ ಸೇರ್ಪಡೆಯಾದರು. ಪಕ್ಷ ಸಂಘಟನೆ ಮಾಡಲು ಇನ್ನಷ್ಟು ಶಕ್ತಿಯನ್ನು ಈ ಕಾರ್ಯಕ್ರಮ ತುಂಬಿದೆ.

ಬಡ ಜನರು, ಸೋಷಿತರು, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲಾ ಜನರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.

#Kodagu #Virajpet #Madikeri #Ponnampet #Kutta