Unscientific policies responsible for natural disasters in Kodagu, 05/07/2022
ಜಿಲ್ಲಾಡಳಿತದ ಅವೈಜ್ಞಾನಿಕ ನೀತಿಯೇ ಕೊಡಗಿನಲ್ಲಿ ಪ್ರಕೃತಿ ವಿಕೋಪಕ್ಕೆ ಮೂಲ ಕಾರಣ. ಕಳೆದ ಹಲವಾರು ದಿನಗಳಿಂದ ಕೊಡಗಿನ ವಿವಿಧ ಸ್ಥಳಗಳಲ್ಲಿ ಸರಣಿ ಭೂಕಂಪನವಾಗುತ್ತಿವೆ. ಇದರ ಜೊತೆಗೆ ಮುಂಗಾರಿನ ಆಗಮನದಿಂದ ಸತತ ಮಳೆ ಭೂಕುಸಿತಕ್ಕೂ ಕಾರಣವಾಗುತ್ತಿದೆ. ಇದಕ್ಕೆ ಪ್ರಕೃತಿಯನ್ನು ಮಾತ್ರ ಹೊಣೆ ಮಾಡುವುದು ಸಲ್ಲ.
ಕೊಡಗಿನಲ್ಲಿ ಭೂ ಪರಿವರ್ತನೆ ಒಂದು ದೊಡ್ಡ ದಂಧೆಯಾಗಿದೆ. ಕೃಷಿ ಭೂಮಿಯಲ್ಲಿ ಬದವಣೆಗಳು ಹಾಗೂ ರೆಸಾರ್ಟ್ ನಿರ್ಮಾಣ ಮಾಡಲು ಎಗ್ಗಿಲ್ಲದಂತೆ ಅನುಮತಿ ಕೊಡಲಾಗುತ್ತಿದೆ. ರಾಜಕೀಯ ಒತ್ತಡದಲ್ಲಿ ಮನಸ್ಸಿಗೆ ಬಂದಂತೆ ಭು ಪರಿವರ್ತನೆ ನಡೆಯುತ್ತಿದೆ.
2017 ಮತ್ತು 2018 ರಲ್ಲಿ ಸಂಭವಿಸಿದ ವಿಕೋಪದ ನಂತರ ತಾಂತ್ರಿಕ ಸಮಿತಿಯ ರಚನೆಯಾಯಿತು. ಭೂ ಪರಿವರ್ತನೆಗೆ ಈ ಸಮಿತಿಯ ಶಿಫಾರಸ್ಸು ಅಗತ್ಯ. ಆದರೆ ಜಿಲ್ಲಾಡಳಿತ ತಾಂತ್ರಿಕ ಸಮಿತಿಯನ್ನು ಕಡೆಗಣನೆ ಮಾಡಿದೆ. ಪ್ರಕೃತಿಯ ಮುಂದೆ ನಾವೆಲ್ಲರೂ ಸಣ್ಣವರು. ಪ್ರಕೃತಿಯನ್ನು ಎದುರು ಹಾಕಿಕೊಳ್ಳುವುದರಿಂದ ನಮಗೆ ಉಳಿಗಾಲವಿಲ್ಲ.
#WesternGhats #Landslide #Karnataka #Kodagu #Coorg #Madikeri #Virajpet #Kushalnagar #Gonikoppal #Ponnampet
